ಈ ವೇಳೆವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದರು. ಎರಡು ದಿನಗಳ ಹಿಂದೆ ಸಮೀಪದ ಸಿಟಿ ಸೆಂಟರ್ ಮಾಲ್ನಲ್ಲಿ ವೀರ ಸಾವರ್ಕರ್ ಭಾವಚಿತ್ರ ತೆಗೆಸಲಾಗಿತ್ತು. ಹೀಗಾಗಿ ಇಲ್ಲಿಯೇ ಸಾವರ್ಕರ್ ಕಟೌಟ್ ಹಾಕಲು ಅವಕಾಶ ಕೊಡಿ ಎಂದು ಒತ್ತಾಯಿಸಿದರು. ಕೆಲ ಹೊತ್ತಿನ ನಂತರ ಶಿವಪ್ಪ ನಾಯಕ ಪ್ರತಿಮೆಯ ಬಳಿಗೆ ತೆರಳಿ ಪ್ರತಿಭಟಿಸಿದರು.