‘ಹಿಂದೂ ಧರ್ಮ ಒಡೆಯುವ ಪ್ರಯತ್ನ ನಡೆಸಿದ್ದಕ್ಕಾಗಿ ಸಿದ್ದರಾಮಯ್ಯ ಪಶ್ಚಾತ್ತಾಪ ವ್ಯಕ್ತಪಡಿಸಿದರು’ ಎಂಬ ರಂಭಾಪುರಿ ಮಠದ ಪ್ರಸನ್ನ ವೀರಸೋಮೇಶ್ವರ ಸ್ವಾಮೀಜಿ ಹೇಳಿಕೆ ಕುರಿತು ಶನಿವಾರ ಪ್ರತಿಕ್ರಿಯಿಸಿದ ಅವರು, ‘ಧರ್ಮ ಒಡೆಯುವ ಉದ್ದೇಶ ನಮಗೆ ಇರಲಿಲ್ಲ. ಶಾಮನೂರು ಶಿವಶಂಕರಪ್ಪ, ಮಾತೆ ಮಹಾದೇವಿ ಪತ್ರ ನೀಡಿ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡುವಂತೆ ಕೋರಿದ್ದರು. ಆ ಬಳಿಕ ಏನೇನು ಆಯಿತು ಎಂಬುದನ್ನು ಸ್ವಾಮೀಜಿಗೆ ವಿವರಿಸಿದ್ದೆ ಅಷ್ಟೆ’ ಎಂದರು.