<p><strong>ಹುಬ್ಬಳ್ಳಿ:</strong> ಇಲ್ಲಿನ ಸಿದ್ಧಾರೂಢ ಮಠದ ಆವರಣದಲ್ಲಿ ಕಾಲಿಡುತ್ತಿದ್ದಂತೆಯೇ ಸಾಧುಗಳು ಪಠಿಸುವ ಷಡಕ್ಷರಿ ಮಂತ್ರ (ಓಂ ನಮಃ ಶಿವಾಯ) ಕಿವಿಗೆ ಬೀಳುತ್ತದೆ. ಇದು ಒಂದೆರಡು ಗಂಟೆಗೆ ಸೀಮಿತವಾದ ಪಠಣವಲ್ಲ; 99 ವರ್ಷಗಳಿಂದ ದಿನದ 24 ತಾಸೂ ನಡೆಯುತ್ತಿರುವ ಶಿವಜಪ.</p>.<p>ಸಿದ್ಧಾರೂಢರು ಪಂಢರಪುರ ದಿಂದ ತಂದಿದ್ದ ಏಕತಾರಿಯನ್ನು, ಸಾಧುವೊಬ್ಬರು ನೆಲಕ್ಕೆ ತಾಕಿಸದಂತೆ ಸದಾಕಾಲ ಕೊರಳಲ್ಲಿ ಹಾಕಿಕೊಂಡು ‘ಓಂ ನಮಃ ಶಿವಾಯ’ ಎಂದು ಪಠಿಸುವ ಪರಿಪಾಠ ಆರಂಭಿಸಿದ್ದರು. ಅದು ಇಂದಿಗೂ ಮುಂದುವರಿದಿದೆ.</p>.<p>ಷಡಕ್ಷರಿ ಮಂತ್ರೋಚ್ಚಾರಣೆ ನಿರಂತರವಾಗಿದ್ದು, 12 ಮಂದಿ ಸಾಧುಗಳು ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ನಿತ್ಯ ಹಗಲು ಒಂದು ತಾಸು, ರಾತ್ರಿ ಒಂದು ತಾಸಿನಂತೆ ಸರದಿಯಲ್ಲಿ ಜಪ ಮಾಡುತ್ತಿದ್ದಾರೆ.</p>.<p>‘ಶಿವ ನಾಮದ ಜಪದಲ್ಲಿಯೇ ಜೀವನದ ಸಾರ್ಥಕತೆಯನ್ನು ಕಂಡುಕೊ ಳ್ಳುತ್ತಿದ್ದೇವೆ. ಸಿದ್ಧಾರೂಢರ ಆದೇಶ ಪಾಲನೆಯ ಅವಕಾಶ ನಮಗೆ ಸಿಕ್ಕಿರುವುದು ನಮ್ಮ ಪುಣ್ಯ’ ಎನ್ನುತ್ತಾರೆ ಹತ್ತು ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಾಧು ನಂದೀಶ್ವರ.</p>.<p>‘1929 ಆಗಸ್ಟ್ 21ಕ್ಕೆ ಸಿದ್ಧಾರೂ ಢರು ಲಿಂಗೈಕ್ಯರಾದರು. ಅದಕ್ಕೂ ಹತ್ತು ವರ್ಷಗಳ ಮೊದಲೇ ಅವರು ಫಂಡರಪುರಕ್ಕೆ ಹೋಗಿದ್ದಾಗ ಅಲ್ಲಿಂದ ಏಕತಾರಿ ತಂದಿದ್ದರು. ಆದರೆ, ವರ್ಷ ನಿಖರವಾಗಿ ಗೊತ್ತಿಲ್ಲ’ ಎಂದು ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಡಿ.ಡಿ. ಮಾಳಗಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಮಠದಲ್ಲಿ ಸದಾಕಾಲ ಶಿವನ ಜಪ, ಜ್ಞಾನ ಪ್ರಸರಣ ಹಾಗೂ ಅನ್ನ ದಾಸೋಹ ನಡೆಯಬೇಕು ಎಂದು ಅಪ್ಪಣೆ ಕೊಟ್ಟಿದ್ದರಿಂದ ಅದನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಸೂರ್ಯ, ಚಂದ್ರರು ಇರುವವರೆಗೂ ಇವು ನಡೆಯಲಿವೆ’ ಎಂದರು.</p>.<p class="Subhead"><strong>ಧ್ವನಿವರ್ಧಕ ವ್ಯವಸ್ಥೆ: </strong>ಇಲ್ಲಿಯವರೆಗೆ ಸಾಧುಗಳ ಶಿವನಾಮದ ಜಪ ಸಿದ್ಧಾರೂಢರ ಗದ್ದುಗೆ ಬಳಿ ಹೋದಾಗ ಮಾತ್ರ ಕೇಳಿ ಬರುತ್ತಿತ್ತು. ಫೆ.27ರಿಂದ ಮಠದಿಂದ ಮುಖ್ಯ ದ್ವಾರದವರೆಗೆ ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ. ಹೀಗಾಗಿ, ಈಗ ಮಠದ ಆವರಣವೆಲ್ಲ ಶಿವನಾಮದಿಂದ ಅನುರಣಿಸುತ್ತಿದೆ.</p>.<p>ಭಕ್ತರು ಹಾಗೂ ಸುತ್ತಲಿನ ನಿವಾಸಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ರಾತ್ರಿ 12 ರಿಂದ ಬೆಳಗಿನ ಜಾವ 4 ಗಂಟೆಯವರೆಗೆ ಧ್ವನಿ ವರ್ಧಕಗಳನ್ನು ಬಂದ್ ಮಾಡಲಾಗುತ್ತಿದೆ. ಆದರೆ, ಗದ್ದುಗೆ ಮುಂದೆ ಪಠಣ ನಡೆದಿರುತ್ತದೆ ಎಂದು ಮಾಳಗಿ ತಿಳಿಸಿದರು.</p>.<p>ಸಿದ್ಧಾರೂಢರ ಕಾಲದಿಂದಲೂ ಬೆಳಗುತ್ತಿರುವ ‘ನಂದಾದೀಪ’ ಇಲ್ಲಿದ್ದು, ಆರೂಢ ಜ್ಯೋತಿ ಎನಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಇಲ್ಲಿನ ಸಿದ್ಧಾರೂಢ ಮಠದ ಆವರಣದಲ್ಲಿ ಕಾಲಿಡುತ್ತಿದ್ದಂತೆಯೇ ಸಾಧುಗಳು ಪಠಿಸುವ ಷಡಕ್ಷರಿ ಮಂತ್ರ (ಓಂ ನಮಃ ಶಿವಾಯ) ಕಿವಿಗೆ ಬೀಳುತ್ತದೆ. ಇದು ಒಂದೆರಡು ಗಂಟೆಗೆ ಸೀಮಿತವಾದ ಪಠಣವಲ್ಲ; 99 ವರ್ಷಗಳಿಂದ ದಿನದ 24 ತಾಸೂ ನಡೆಯುತ್ತಿರುವ ಶಿವಜಪ.</p>.<p>ಸಿದ್ಧಾರೂಢರು ಪಂಢರಪುರ ದಿಂದ ತಂದಿದ್ದ ಏಕತಾರಿಯನ್ನು, ಸಾಧುವೊಬ್ಬರು ನೆಲಕ್ಕೆ ತಾಕಿಸದಂತೆ ಸದಾಕಾಲ ಕೊರಳಲ್ಲಿ ಹಾಕಿಕೊಂಡು ‘ಓಂ ನಮಃ ಶಿವಾಯ’ ಎಂದು ಪಠಿಸುವ ಪರಿಪಾಠ ಆರಂಭಿಸಿದ್ದರು. ಅದು ಇಂದಿಗೂ ಮುಂದುವರಿದಿದೆ.</p>.<p>ಷಡಕ್ಷರಿ ಮಂತ್ರೋಚ್ಚಾರಣೆ ನಿರಂತರವಾಗಿದ್ದು, 12 ಮಂದಿ ಸಾಧುಗಳು ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ನಿತ್ಯ ಹಗಲು ಒಂದು ತಾಸು, ರಾತ್ರಿ ಒಂದು ತಾಸಿನಂತೆ ಸರದಿಯಲ್ಲಿ ಜಪ ಮಾಡುತ್ತಿದ್ದಾರೆ.</p>.<p>‘ಶಿವ ನಾಮದ ಜಪದಲ್ಲಿಯೇ ಜೀವನದ ಸಾರ್ಥಕತೆಯನ್ನು ಕಂಡುಕೊ ಳ್ಳುತ್ತಿದ್ದೇವೆ. ಸಿದ್ಧಾರೂಢರ ಆದೇಶ ಪಾಲನೆಯ ಅವಕಾಶ ನಮಗೆ ಸಿಕ್ಕಿರುವುದು ನಮ್ಮ ಪುಣ್ಯ’ ಎನ್ನುತ್ತಾರೆ ಹತ್ತು ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಾಧು ನಂದೀಶ್ವರ.</p>.<p>‘1929 ಆಗಸ್ಟ್ 21ಕ್ಕೆ ಸಿದ್ಧಾರೂ ಢರು ಲಿಂಗೈಕ್ಯರಾದರು. ಅದಕ್ಕೂ ಹತ್ತು ವರ್ಷಗಳ ಮೊದಲೇ ಅವರು ಫಂಡರಪುರಕ್ಕೆ ಹೋಗಿದ್ದಾಗ ಅಲ್ಲಿಂದ ಏಕತಾರಿ ತಂದಿದ್ದರು. ಆದರೆ, ವರ್ಷ ನಿಖರವಾಗಿ ಗೊತ್ತಿಲ್ಲ’ ಎಂದು ಸಿದ್ಧಾರೂಢ ಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಡಿ.ಡಿ. ಮಾಳಗಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಮಠದಲ್ಲಿ ಸದಾಕಾಲ ಶಿವನ ಜಪ, ಜ್ಞಾನ ಪ್ರಸರಣ ಹಾಗೂ ಅನ್ನ ದಾಸೋಹ ನಡೆಯಬೇಕು ಎಂದು ಅಪ್ಪಣೆ ಕೊಟ್ಟಿದ್ದರಿಂದ ಅದನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಸೂರ್ಯ, ಚಂದ್ರರು ಇರುವವರೆಗೂ ಇವು ನಡೆಯಲಿವೆ’ ಎಂದರು.</p>.<p class="Subhead"><strong>ಧ್ವನಿವರ್ಧಕ ವ್ಯವಸ್ಥೆ: </strong>ಇಲ್ಲಿಯವರೆಗೆ ಸಾಧುಗಳ ಶಿವನಾಮದ ಜಪ ಸಿದ್ಧಾರೂಢರ ಗದ್ದುಗೆ ಬಳಿ ಹೋದಾಗ ಮಾತ್ರ ಕೇಳಿ ಬರುತ್ತಿತ್ತು. ಫೆ.27ರಿಂದ ಮಠದಿಂದ ಮುಖ್ಯ ದ್ವಾರದವರೆಗೆ ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ. ಹೀಗಾಗಿ, ಈಗ ಮಠದ ಆವರಣವೆಲ್ಲ ಶಿವನಾಮದಿಂದ ಅನುರಣಿಸುತ್ತಿದೆ.</p>.<p>ಭಕ್ತರು ಹಾಗೂ ಸುತ್ತಲಿನ ನಿವಾಸಿಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ರಾತ್ರಿ 12 ರಿಂದ ಬೆಳಗಿನ ಜಾವ 4 ಗಂಟೆಯವರೆಗೆ ಧ್ವನಿ ವರ್ಧಕಗಳನ್ನು ಬಂದ್ ಮಾಡಲಾಗುತ್ತಿದೆ. ಆದರೆ, ಗದ್ದುಗೆ ಮುಂದೆ ಪಠಣ ನಡೆದಿರುತ್ತದೆ ಎಂದು ಮಾಳಗಿ ತಿಳಿಸಿದರು.</p>.<p>ಸಿದ್ಧಾರೂಢರ ಕಾಲದಿಂದಲೂ ಬೆಳಗುತ್ತಿರುವ ‘ನಂದಾದೀಪ’ ಇಲ್ಲಿದ್ದು, ಆರೂಢ ಜ್ಯೋತಿ ಎನಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>