‘ಈ ಚುನಾವಣೆ ಅಗತ್ಯವಿರಲಿಲ್ಲ. ಜನರು ಹಾಗೂ ತೆರಿಗೆದಾರರ ಮೇಲೆ ಅನರ್ಹ ಶಾಸಕರು ಹೇರಿದಂತಹ ಚುನಾವಣೆ ಇದು. ಪ್ರಜಾಪ್ರಭುತ್ವಕ್ಕೆ ಮಾರಕವಾದುದು. ಜನರು ತೆರಿಗೆ ಕಟ್ಟಿದ ಹಣ ಅನರ್ಹ ಶಾಸಕರಿಂದಾಗಿ ವ್ಯಯವಾಗುತ್ತಿದೆ. ಇದಕ್ಕೆ ಕಾರಣರಾರು ಎನ್ನುವುದನ್ನು ಜನರು ಅರಿತುಕೊಳ್ಳಬೇಕು. ಅನರ್ಹ ಶಾಸಕರ ತೀರ್ಮಾನದ ಬಗ್ಗೆ ಜನರಲ್ಲಿ ಆಕ್ರೋಶವಿದೆ’ ಎಂದರು.