‘ಚರಿತ್ರೆ, ನಮ್ಮ ದೇಶದ ಭೂಗೋಳದ ವೈಶಿಷ್ಟ್ಯ, ನಮ್ಮ ಸಮಾಜದ ವೈಶಿಷ್ಟ್ಯ, ರಾಜಕೀಯ, ಸಾಂಸ್ಕೃತಿಕಹಾಗೂ ನಾಗರಿಕತೆಯ ಬೆಳವಣಿಗೆಗಳನ್ನು ನಮ್ಮ ರಾಜ್ಯದ ವಿವಿಧ ವಲಯದ ತಜ್ಞರೇ ರಚಿಸಿದ ಪಠ್ಯವಸ್ತುಗಳನ್ನು ಅಧ್ಯಯನ ಮಾಡುವುದು ಅವಶ್ಯಕ. ಇವು ಇಡೀ ದೇಶಕ್ಕೆ ಸಾರಾಸಗಟಾಗಿ ಅನ್ವಯವಾಗುವ ವಿಷಯಗಳಲ್ಲ. ಬರಗೂರು ರಾಮಚಂದ್ರಪ್ಪ ಸಮಿತಿ ಈ ಹಿನ್ನೆಲೆಯಲ್ಲೇ ನಮ್ಮ ಶಾಲೆಗಳ ಪಠ್ಯಪುಸ್ತಕಗಳನ್ನು ತಯಾರಿಸಿದೆ. ಆದರೂ ಪರಿಷ್ಕರಣೆ ಅವಶ್ಯಕವೆಂದು ಕಂಡುಬಂದಾಗ ಸಂಬಂಧಪಟ್ಟ ಎಲ್ಲಾ ತಜ್ಞರೊಂದಿಗೆ ಸಮಾಲೋಚಿಸುವುದು ಯೋಗ್ಯವಾದ ಕ್ರಮ’ ಎಂದು ಅವರು ಹೇಳಿದ್ದಾರೆ.