ಜಾತಿ ಆಧಾರದ ಮೇಲೆ ಚುನಾವಣೆ ನಡೆಸುವುದನ್ನು ರಾಜಕೀಯ ಪಕ್ಷಗಳು ರೂಢಿ ಮಾಡಿಕೊಂಡಿವೆ. ಬೊಮ್ಮಾಯಿ ಅವರದ್ದು ಚುನಾವಣೆ ಬಜೆಟ್ ಆಗಿರುವುದರಿಂದ ಈ ಬಾರಿ ಜಾತಿಗಳನ್ನು ಓಲೈಸುವ ಸಾಧ್ಯತೆ ಹೆಚ್ಚಿದೆ. ಪೂರಕವೆಂಬಂತೆ, ಗಾಣಿಗ, ಮಡಿವಾಳ, ಕುಂಬಾರ, ಮೇದಾರ, ಅಕ್ಕಸಾಲಿಗ ಮತ್ತಿತರ ಸಣ್ಣ ಸಮುದಾಯದವರಿಗೆ ಪ್ರತ್ಯೇಕ ನಿಗಮಗಳನ್ನು ರಚಿಸುವ ಘೋಷಣೆ ಹೊರಬೀಳಲಿದೆ. ಸಾಂಪ್ರದಾಯಿಕ ವೃತ್ತಿ ಆಧಾರಿತ ಸಮುದಾಯದವರಿಗೆ ಪ್ರೋತ್ಸಾಹ ನೀಡಲು ₹50 ಸಾವಿರ ಸಹಾಯಧನ ನೀಡುವ ಬಗ್ಗೆಯೂ ಬೊಮ್ಮಾಯಿ ಪ್ರಕಟಿಸಲಿದ್ದಾರೆ ಎಂದು ಗೊತ್ತಾಗಿದೆ.