‘ಮೃತದೇಹಗಳ ರುಂಡ, ಮುಂಡ ಬೇರ್ಪಡಿಸಿದ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗಿತ್ತು. ರಾಜ್ಯ, ಹೊರರಾಜ್ಯಗಳಲ್ಲಿ 1,116ಕ್ಕೂ ಹೆಚ್ಚು ಮಹಿಳೆಯರ ನಾಪತ್ತೆ ಪ್ರಕರಣಗಳನ್ನು ಪರಿಶೀಲನೆ ಮಾಡಲಾಗಿದೆ. ರಾಜ್ಯದಾದ್ಯಂತ 10 ಸಾವಿರ ಕರಪತ್ರ ಹಂಚಿ ಕೊಲೆಯಾದ ಮಹಿಳೆಯರ ಮಾಹಿತಿ ಕೋರಲಾಗಿತ್ತು. ₹ 1 ಲಕ್ಷ ಬಹುಮಾನವನ್ನೂ ಘೋಷಣೆ ಮಾಡಲಾಗಿತ್ತು’ ಎಂದರು.