ಡಿ.ಕೆ. ಬಸವರಾಜ (25), ಹ್ಯಾರಿಸ್ (17) ಮೃತರು. ‘ಹಿನ್ನೀರಿನಲ್ಲಿ ವಿಹರಿಸಲು ಯುವಕರು ಹರಿಗೋಲಿನಲ್ಲಿ ಹೋಗಿದ್ದರು. ಈ ವೇಳೆ ತೆಪ್ಪ ಮುಗುಚಿ ಬಿದ್ದು ನೀರು ಪಾಲಾದರು. ಅಗ್ನಿಶಾಮಕ ದಳ ಸಿಬ್ಬಂದಿ ಸುಮಾರು ಎರಡು ಗಂಟೆ ಶೋಧ ನಡೆಸಿದ ಬಳಿಕ ಮೃತದೇಹಗಳು ಪತ್ತೆಯಾದವು’ ಎಂದು ಡಿ.ವೈ.ಎಸ್ಪಿ. ಎಂ.ಸಿ. ಶಿವಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.