ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯರಾದ ವಿಲ್ಫ್ರೆಡ್ ಡಿ'ಸೋಜ, ‘ಬಜತ್ತೂರು ಗ್ರಾಮದಲ್ಲಿ 2 ಮನೆ ಮಾತ್ರ ಕುಸಿದು ಬಿದ್ದಿದ್ದು, ಉಳಿದಂತೆ ಹಲವು ಮನೆಗಳಿಗೆ ನೀರು ನುಗ್ಗಿತ್ತು. ಪರಿಹಾರ ಧನ ನೀಡುವಾಗಲೂ ಅವ್ಯವಹಾರ ನಡೆದ ದೂರುಗಳಿತ್ತು. ಅಲ್ಲದೇ, ಸಂತ್ರಸ್ತರಿಗೆ ನೀಡಿದ ಬಳಿಕ ಉಳಿದ ಬಟ್ಟೆಗಳನ್ನು ಇಲ್ಲಿ ಇರಿಸಿಕೊಳ್ಳಬಾರದಾಗಿತ್ತು. ಬೇರೆ ಸಂತ್ರಸ್ತರಿಗೆ ಕಳುಹಿಸಿ ಕೊಡಬಹುದಿತ್ತು’ ಎಂದು ದೂರಿದ್ದಾರೆ.