ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪುಗೆ ಮೈಸೂರು ಹುಲಿ ಬಿರುದು ಕೊಟ್ಟವರು ಯಾರು: ರೋಹಿತ್ ಚಕ್ರತೀರ್ಥ

Last Updated 27 ಮಾರ್ಚ್ 2022, 17:41 IST
ಅಕ್ಷರ ಗಾತ್ರ

ಬೆಂಗಳೂರು: ‘ಟಿಪ್ಪುವಿಗೆ ‘ಮೈಸೂರು ಹುಲಿ’ ಹಾಗೂ ‘ಸುಲ್ತಾನ್‌’ ಎಂಬ ಬಿರುದುಗಳನ್ನು ಕೊಟ್ಟವರು ಯಾರು. ಈ ಕುರಿತ ದಾಖಲೆಗಳು ಯಾರ ಬಳಿಯಾದರೂ ಇವೆಯೇ’ ಎಂದು ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಪ್ರಶ್ನಿಸಿದರು.

‘ಮಂಥನ’ ಹಮ್ಮಿಕೊಂಡಿದ್ದ ಮೇಕಿಂಗ್ ಆಫ್ ‘ದಿ ಕಾಶ್ಮೀರ್‌ ಫೈಲ್ಸ್‌’ ವಿಮರ್ಶೆ ಮತ್ತು ಸಂವಾದ’ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ‘ನಾವು ಸುಳ್ಳು ಇತಿಹಾಸಗಳನ್ನೇ ಸೃಷ್ಟಿಸುತ್ತಿದ್ದೇವೆ ಎಂಬುದಕ್ಕೆ ಇದೇ ನಿದರ್ಶನ’ ಎಂದರು.

‘ಕಾರ್ಕೋಟ ವಂಶದ ಲಲಿತಾದಿತ್ಯನುಕಾಶ್ಮೀರದ ಪ್ರಮುಖ ರಾಜ. ಈತ36 ವರ್ಷ ರಾಜ್ಯಭಾರ ಮಾಡಿದ್ದ. ಮಾರ್ತಾಂಡ ದೇವಸ್ಥಾನ ನಿರ್ಮಿಸಿ ಅಭಿವೃದ್ಧಿಪಡಿಸಿದ್ದ. ದೇಶದ ಎಲ್ಲಾ ವಿದ್ವಾಂಸರಿಗೆ ನೆಲೆ ಕಲ್ಪಿಸಿದ್ದ. ಹೀಗಾಗಿ ಈ ವರ್ಷದ ಪಠ್ಯಕ್ರಮದಲ್ಲಿ ಈತನ ಕುರಿತ ಪಾಠ ಸೇರ್ಪಡೆ ಮಾಡಿದ್ದೇವೆ’ ಎಂದು ತಿಳಿಸಿದರು.

‘ದೇಶದ ವಿವಿಧ ಪ್ರಾಂತ್ಯಗಳಲ್ಲಿ ಧೀಮಂತಿಕೆ ತೋರಿದವರ ಬಗ್ಗೆ ನಾವು ಅರಿಯದಿದ್ದರೆ ಈ ದೇಶ ಪರಕೀಯವಾಗಿಯೇ ಉಳಿಯಲಿದೆ. ಹೀಗಾಗಿಅಹೊಂ ರಾಜವಂಶದ ಕುರಿತ ಪಾಠವನ್ನೂ ಪಠ್ಯಕ್ರಮದಲ್ಲಿ ಪರಿಚಯಿಸಿದ್ದೇವೆ’ ಎಂದು ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT