ಚಿತ್ರದುರ್ಗ: ಐಮಂಗಲದಲ್ಲಿ ಎರಡು ಆನೆಗಳು ಪ್ರತ್ಯಕ್ಷವಾಗಿವೆ. ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಹಿರಿಯೂರು ಬಳಿ ಕಾಣಿಸಿಕೊಳ್ಳುತ್ತಿದ್ದ ಆನೆಗಳು, ಈ ಬಾರಿ ತುಸು ದೂರ ಬಂದಿವೆ.
ಸದ್ಯ ಐಮಂಗಲ ಸಮೀಪದ ಭರಮಪುರ ಮತ್ತು ಕಲ್ಲಟ್ಟಿ ಭಾಗದ ಜಮೀನಿನಲ್ಲಿ ಆನೆಗಳು ಕಾಣಿಸಿಕೊಂಡಿದ್ದು, ಹಿರಿಯೂರಿನ ಆರ್ಎಫ್ಓ ನಾಗೇಂದ್ರ ನೇತೃತ್ವದಲ್ಲಿ ಆನೆಗಳನ್ನು ಓಡುಸುವ ಕಾರ್ಯ ನಡೆದಿದೆ.
ಜಮೀನುಗಳಲ್ಲಿ ಫಸಲು ಸಮೃದ್ಧವಾಗಿರುವುದರಿಂದ, ಬೆಳೆ ಹುಲುಸಾಗಿರುವ ಕ್ಷೇತ್ರದಲ್ಲೇ ಸುತ್ತಾಡುತ್ತಿವೆ.
ಆನೆಗಳನ್ನು ಚನ್ನಗಿರಿ ಮೂಲಕ ಭದ್ರಾ ಅರಣ್ಯಕ್ಕೆ ಅಥವಾ ತುಮಕೂರು ಜಿಲ್ಲೆಯ ಬುಕ್ಕಾಪಟ್ಟಣ ಮೂಲಕ ದೇವರಾಯನದುರ್ಗದತ್ತ ಓಡಿಸುವ ಪ್ರಯತ್ನ ಮಾಡಲಾಗುತ್ತಿದೆ.