‘ಈ ಹಿಂದೆ ಊರಿನಲ್ಲಿ ವಿಚಿತ್ರ ಕಾಯಿಲೆಯಿಂದ ಜನ, ಜಾನುವಾರುಗಳು ಮೃತಪಟ್ಟಿದ್ದವು. ಇದರ ಪರಿಹಾರಕ್ಕಾಗಿ ಗ್ರಾಮಸ್ಥರು ಒಂದು ದಿನ ಮನೆಗಳನ್ನು ಬಿಟ್ಟು ಹೊಲದಲ್ಲಿ ಬಿಡಾರ ಹೂಡುತ್ತಾರೆ. ಅಲ್ಲಿಯೇ ವಿಶೇಷ ಅಡುಗೆ ತಯಾರಿಸಿ ದಿನ ಕಳೆಯುತ್ತಾರೆ. ಇದನ್ನು ವನಭೋಜನ ಎಂದು ಕರೆಯುತ್ತಾರೆ. ಇದರಿಂದ ಗ್ರಹಣದೋಷ, ರೋಗರುಜಿನಗಳು ಬರುವುದಿಲ್ಲ’ ಎಂದು ಗ್ರಾಮದ ವ್ಯಕ್ತಿಯೊಬ್ಬರು ತಿಳಿಸಿದರು.