ಮುಧೋಳದ ಶಾಸಕರಾದ ತಾವು ಅಧಿವೇಶನದಲ್ಲಿ ಭಾಗಿಯಾಗಿರುವಾಗ ಮುಧೋಳ ಪುರಸಭೆಯ ಸುಮಾರು ₨ ೩ ಕೋಟಿ ಮೊತ್ತದ ಯೋಜನೆಗಳ ಕಾಮಗಾರಿಗೆ ತಿಮ್ಮಾಪುರ ಅವರು ಗುದ್ದಲಿಪೂಜೆ ಮಾಡಿದ್ದಾರೆ. ಇದರಿಂದ ತಮ್ಮ ಹಕ್ಕಿಗೆ ಚ್ಯುತಿಯಾಗಿದ್ದು ಈ ವಿಷಯವನ್ನು ಹಕ್ಕುಬಾಧ್ಯತಾ ಸಮಿತಿ ಗೆ ಒಪ್ಪಿಸಬೇಕು ಎಂದು ಕಾರಜೋಳ ಮನವಿ ಮಾಡಿಕೊಂಡರು. ಇದಕ್ಕೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಒಪ್ಪಿಗೆ ಸೂಚಿಸಿದರು.