ನವದೆಹಲಿ (ಪಿಟಿಐ): ನಾಡಿನ ಹೆಸರಾಂತ ಸಾಹಿತಿ ನಾ ಡಿಸೋಜಾ ಅವರು ಈ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಅವರ `ಮುಳುಗಡೆಯ ಊರಿಗೆ ಬಂದವರು~ ಕೃತಿಗೆ ಈ ಪುರಸ್ಕಾರ ಲಭಿಸಿದೆ. ಡಿಸೋಜ ಮಾತ್ರವಲ್ಲದೇ ವಿವಿಧ ಭಾಷೆಗಳ ಒಟ್ಟು 19 ಸಾಹಿತಿಗಳು ಬಾಲ ಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಏಳು ಕವನ ಸಂಕಲನ, ಆರು ಕಾದಂಬರಿ ಮತ್ತು ಐದು ಕಿರು ಕತೆಗಳನ್ನು ಈ ವರ್ಷದ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಅಲ್ಲದೇ, ಮಕ್ಕಳ ಸಾಹಿತ್ಯಕ್ಕೆ ನೀಡಿರುವ ಸಮಗ್ರ ಕೊಡುಗೆಯನ್ನು ಪರಿಗಣಿಸಿ ಐವರು ಲೇಖಕರನ್ನು ಆಯ್ಕೆ ಮಾಡಲಾಗಿದೆ.
ದೇಶದ 24 ಭಾಷೆಗಳನ್ನು ಪ್ರತಿನಿಧಿಸುವ ತೀರ್ಪುಗಾರರ ಮಂಡಳಿಯ ಸದಸ್ಯರು ಮಾಡಿರುವ ಶಿಫಾರಸಿನ ಅನ್ವಯ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯಕಾರಿ ಸಮಿತಿ ಈ ಪುರಸ್ಕಾರಕ್ಕೆ ಸಾಹಿತಿಗಳನ್ನು ಆಯ್ಕೆ ಮಾಡಿದೆ.
ಬಾಲಸಾಹಿತ್ಯ ಪುರಸ್ಕಾರವು 50,000 ರೂಪಾಯಿ ನಗದು ಮತ್ತು ತಾಮ್ರದ ಫಲಕವನ್ನು ಒಳಗೊಂಡಿದೆ. ನವೆಂಬರ್ನಲ್ಲಿ ಪುರಸ್ಕಾರ ಪ್ರದಾನ ಸಮಾರಂಭ ನಡೆಯಲಿದೆ.