ಬೆಂಗಳೂರು: ನೂತನ ಸಚಿವರ ಪ್ರಮಾಣ ವಚನ ಸಮಾರಂಭಕ್ಕಾಗಿ ರಾಜಭವನದ ಮುಂದೆ ಅರ್ಧ ತಾಸು ಕಾದು ಪ್ರವೇಶ ಸಿಗದೆ, ವಿಧಾನ ಸಭೆ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಹಿಂದಿರುಗಿದ ಘಟನೆ ನಡೆದಿದೆ.
ಈ ಕುರಿತು ಪ್ರತಿಭಟನೆ ವ್ಯಕ್ತಪಡಿಸಿರುವ ರಮೇಶ್ ಕುಮಾರ್, ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ರವಾನಿಸಿದ್ದಾರೆ.
‘ಇಡೀ ಸರ್ಕಾರಿ ವ್ಯವಸ್ಥೆ ಸಭಾಧ್ಯಕ್ಷರಿಗೆ ಹಾಗೂ ಸಭಾಪತಿಗಳಿಗೆ ಗೌರವಯುತ ವ್ಯವಸ್ಥೆ ಮಾಡುವುದು ಜವಾಬ್ದಾರಿಯಾಗಿರುತ್ತದೆ. ನಿಮ್ಮ ಅಧಿಕಾರಿಗಳ ದುರಹಂಕಾರ, ಅಜ್ಞಾನ ಹಾಗೂ ರಾಜಭವನದ ಒಳಗಿರುವ ಅಧಿಕಾರಿಗಳ ದುರಹಂಕಾರ ಇದಕ್ಕೆ ಕಾರಣ’ ಎಂದು ಪತ್ರ ಮುಖೇನ ಆಕ್ರೋಶ ವ್ಯಕ್ತಪಡಿಸಿದ್ದಾರೆ.