ಅನಂತಕುಮಾರ್ ಸಹೋದರ ನಂದಕುಮಾರ್ ಬ್ರಾಹ್ಮಣ ಸಂಪ್ರದಾಯದ ವಿಧಿ, ವಿಧಾನದಂತೆ ಅಸ್ಥಿ ವಿಸರ್ಜಿಸಿದರು. ಬೆಂಗಳೂರಿನಿಂದ ತಂದ ಅಸ್ಥಿ ತುಂಬಿದ್ದ ಕುಡಿಕೆಯನ್ನು ನದಿಯ ದಡದಲ್ಲಿಟ್ಟು ಸಂಸ್ಕಾರ ಮಾಡಲಾಯಿತು. ಗೋಮಯ, ತುಪ್ಪ, ಮೊಸರು, ಹಾಲು, ಎಳನೀರುಗಳಿಂದ ಅಸ್ಥಿ ಕುಡಿಕೆಗೆ ಸಂಸ್ಕಾರ ಮಾಡಲಾಯಿತು. ಪೂಜೆ ಸಲ್ಲಿಸಿದ ಬಳಿಕ ನದಿಯಲ್ಲಿ ವಿಸರ್ಜಿಸಲಾಯಿತು. ‘ಅನಂತಕುಮಾರ್ ಅಮರ್ ರಹೇ....’ ಘೋಷಣೆಗಳು ಮೊಳಗಿದವು.