ಪೂಜೆಯ ಬಳಿಕ ಮಾತನಾಡಿದ ಪಢಣವೀಸ್, ‘ಪಾಂಡುರಂಗನಲ್ಲಿ ಈ ಹಿಂದಿನ ವರ್ಷ ಉತ್ತಮ ಮಳೆಗಾಗಿ ಪ್ರಾರ್ಥಿಸಿದ್ದೆ. ಈ ಬಾರಿ ‘ರೈತರು ಸಾಲಮುಕ್ತರಾಗಲಿ. ಎಲ್ಲೆಡೆ ಉತ್ತಮ ಮಳೆ– ಬೆಳೆಯಾಗಲಿ ಎಂದು ಬೇಡಿಕೊಂಡೆ’ ಎಂದರು. ಚಂದ್ರಭಾಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದ ಭಕ್ತರು ದರ್ಶನಕ್ಕಾಗಿ ಮೈಲುದ್ದದ ಸರತಿಯಲ್ಲಿ ಕಾದು ನಿಂತಿದ್ದರು. ರಾಜ್ಯವೂ ಸೇರಿದಂತೆ ಆಂಧ್ರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಬಿಹಾರ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು.