<p><strong>ಬೆಂಗಳೂರು: </strong>`ಮಹಿಳಾ ಸಬಲೀಕರಣಕ್ಕೆ ಪೂರಕವಾದ ಮಾರ್ಗೋಪಾಯಗಳ ಕುರಿತು ಮಹಿಳಾ ಸಂಘಟನೆಗಳು ಚರ್ಚೆ ನಡೆಸಿ ಒಂದು ಯೋಜಿತ ನಿರ್ಧಾರವನ್ನು ರೂಪಿಸಬೇಕು. ಈ ನಿರ್ಧಾರದ ಅಂಶಗಳನ್ನು ಬಜೆಟ್ನಲ್ಲಿ ಅಳವಡಿಕೆಗೆ ಚಿಂತಿಸಲಾಗುವುದು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಭರವಸೆ ನೀಡಿದರು.<br /> <br /> ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ನಗರದ ಮಿಥಿಕ್ ಸೊಸೈಟಿಯಲ್ಲಿ ಸೋಮವಾರ ಆಯೋಜಿಸಿದ್ದ `ಮಹಿಳಾ ಆರ್ಥಿಕ ಸಬಲೀಕರಣ~ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. <br /> <br /> `ಹದಿನಾಲ್ಕು ಜಿಲ್ಲೆಗಳಲ್ಲಿರುವ 23 ಸಾವಿರ ದೇವದಾಸಿಯರನ್ನು ಈಗಾಗಲೇ ನಿಗಮವು ಗುರುತಿಸಿದ್ದು, ಸರ್ಕಾರ ಅವರಿಗೆ ಮಾಸಾಶನ ನೀಡುವ ಸಲುವಾಗಿ 6 ಕೋಟಿ ರೂಪಾಯಿ ಅನುದಾನವನ್ನು ಬಜೆಟ್ನಲ್ಲಿ ಕಾಯ್ದಿರಿಸಲಾಗಿದೆ~ ಎಂದು ಹೇಳಿದರು. <br /> <br /> `ಸರ್ಕಾರಿ ಇಲಾಖೆಗಳಲ್ಲೂ ಮಹಿಳಾ ಮೀಸಲಾತಿಗಾಗಿ ಸ್ತ್ರೀಶಕ್ತಿ ಸಂಘಟನೆಗಳು ಹೋರಾಡಬೇಕಿದೆ. ಮಧ್ಯಮ ಮತ್ತು ಉನ್ನತ ವರ್ಗಗಳಲ್ಲಿರುವ ಮಹಿಳೆಯರು ಸಾಕಷ್ಟು ಮಟ್ಟಿಗೆ ಸಬಲರಾಗಿದ್ದಾರೆ. ಸರ್ಕಾರದ ಮಹಿಳಾ ಪರ ಯೋಜನೆಗಳೆಲ್ಲವೂ ತಳ ಸಮುದಾಯದ ಮಹಿಳೆಯರಿಗೆ ತಲುಪಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರಿ ನೌಕರರು ಕಾರ್ಯನಿರ್ವಹಿಸಬೇಕಿದೆ~ ಎಂದು ಹೇಳಿದರು.<br /> <br /> ಬಿಜೆಪಿ ರಾಷ್ಟ್ರೀಯ ವಕ್ತಾರರಾದ ನಿರ್ಮಲಾ ಸೀತಾರಾಮನ್ ಮಾತನಾಡಿ, `ರಾಜ್ಯದ ಒಟ್ಟು 33 ಸರ್ಕಾರಿ ಇಲಾಖೆಗಳಲ್ಲಿ ಮಹಿಳೆಯರಿಗೆ ವಿಶೇಷ ಅನುದಾನ ಒದಗಿಸಬೇಕು ಮತ್ತು ಈವರೆಗೆ ಬಿಡುಗಡೆಯಾದ ಅನುದಾನವು ಮಹಿಳೆಯರ ಕಲ್ಯಾಣಕ್ಕೆ ವಿನಿಯೋಗವಾಗಿರುವ ಬಗ್ಗೆ ಸರ್ಕಾರ ಕೂಲಕಂಷವಾಗಿ ಪರಿಶೀಲಿಸಬೇಕು~ ಎಂದು ಹೇಳಿದರು. <br /> <br /> `ಕೇಂದ್ರ ಸರ್ಕಾರವು ಮಹಿಳಾಪರ ಯೋಜನೆಗಳಿಗೆ ಬಿಡುಗಡೆಗೊಳಿಸುವ ಅನುದಾನವು ಗ್ರಾಮೀಣ ಭಾಗದಲ್ಲಿ ಕಟ್ಟಕಡೆಯ ಮಹಿಳೆಗೆ ತಲುಪಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ನಿಗಾವಹಿಸಬೇಕು~ ಎಂದು ಸಲಹೆ ನೀಡಿದರು. <br /> <br /> ವಿಧಾನ ಪರಿಷತ್ತಿನ ಉಪಸಭಾಪತಿ ವಿಮಲಾಗೌಡ ಮಾತನಾಡಿ, `ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಹಿಳೆಯರಿಗೆ ಆಹ್ವಾನ ನೀಡುವ ಪರಿಪಾಠವನ್ನು ಬಿಜೆಪಿ ಸರ್ಕಾರ ಮುಂದುವರಿಸಬೇಕಿದೆ. ಚರ್ಚೆಯಲ್ಲಿ ಹೊರಬೀಳುವ ನಿರ್ಧಾರಗಳನ್ನು ಅನುಷ್ಠಾನ ಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು~ ಎಂದು ಕಿವಿಮಾತು ಹೇಳಿದರು. <br /> <br /> ಶಾಸಕರಾದ ಕಲ್ಪನಾ ಎಂ.ಎಸ್.ಸಿದ್ದರಾಜು, ಎಂ. ಸತೀಶ್ ರೆಡ್ಡಿ, ನಿಗಮದ ಅಧ್ಯಕ್ಷೆ ಸರೋಜಿನಿ ಭಾರದ್ವಾಜ್ ಇತರರು ಉಪಸ್ಥಿತರಿದ್ದರು. <br /> <br /> <strong>ದೌರ್ಜನ್ಯಗಳಿಗೆ ತುಂಡುಡುಗೆಗಳೇ ಕಾರಣ: ವಿಮಲಾಗೌಡ</strong><br /> `ಮಹಿಳೆಯರ ಮೇಲೆ ನಡೆಯುತ್ತಿರುವ ಬಹುತೇಕ ದೌರ್ಜನ್ಯಗಳಿಗೆ ಅವರು ಧರಿಸುತ್ತಿರುವ ತುಂಡುಡುಗೆಗಳೇ ಕಾರಣ~ ಎಂದು ವಿಧಾನ ಪರಿಷತ್ತಿನ ಉಪಸಭಾಪತಿ ವಿಮಲಾಗೌಡ ಅಭಿಪ್ರಾಯಪಟ್ಟರು. <br /> <br /> `ಸಮಾಜದಲ್ಲಿ ಮಹಿಳೆಯರು ಗೌರವಯುತವಾಗಿ ಬದುಕಲು ತುಂಡುಡುಗೆ ಧರಿಸುವುದನ್ನು ನಿಲ್ಲಿಸಬೇಕು. ಈ ದಿಸೆಯಲ್ಲಿ ವಸ್ತ್ರಸಂಹಿತೆ ಜಾರಿಯಾದರೆ ಒಳ್ಳೆಯದು~ ಎಂದರು. <br /> <br /> `ಭಾರತೀಯ ಸಂಸ್ಕೃತಿಯಂತೆ ಮಹಿಳೆಯರು ನಡೆದುಕೊಂಡರೆ ಆಕೆಯ ಚಾರಿತ್ರ್ಯಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ. ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ವಸ್ತ್ರಗಳು ಮಹಿಳೆಗೆ ಹೆಚ್ಚು ಗೌರವ ನೀಡುತ್ತವೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ಮಹಿಳಾ ಸಬಲೀಕರಣಕ್ಕೆ ಪೂರಕವಾದ ಮಾರ್ಗೋಪಾಯಗಳ ಕುರಿತು ಮಹಿಳಾ ಸಂಘಟನೆಗಳು ಚರ್ಚೆ ನಡೆಸಿ ಒಂದು ಯೋಜಿತ ನಿರ್ಧಾರವನ್ನು ರೂಪಿಸಬೇಕು. ಈ ನಿರ್ಧಾರದ ಅಂಶಗಳನ್ನು ಬಜೆಟ್ನಲ್ಲಿ ಅಳವಡಿಕೆಗೆ ಚಿಂತಿಸಲಾಗುವುದು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಭರವಸೆ ನೀಡಿದರು.<br /> <br /> ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ನಗರದ ಮಿಥಿಕ್ ಸೊಸೈಟಿಯಲ್ಲಿ ಸೋಮವಾರ ಆಯೋಜಿಸಿದ್ದ `ಮಹಿಳಾ ಆರ್ಥಿಕ ಸಬಲೀಕರಣ~ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. <br /> <br /> `ಹದಿನಾಲ್ಕು ಜಿಲ್ಲೆಗಳಲ್ಲಿರುವ 23 ಸಾವಿರ ದೇವದಾಸಿಯರನ್ನು ಈಗಾಗಲೇ ನಿಗಮವು ಗುರುತಿಸಿದ್ದು, ಸರ್ಕಾರ ಅವರಿಗೆ ಮಾಸಾಶನ ನೀಡುವ ಸಲುವಾಗಿ 6 ಕೋಟಿ ರೂಪಾಯಿ ಅನುದಾನವನ್ನು ಬಜೆಟ್ನಲ್ಲಿ ಕಾಯ್ದಿರಿಸಲಾಗಿದೆ~ ಎಂದು ಹೇಳಿದರು. <br /> <br /> `ಸರ್ಕಾರಿ ಇಲಾಖೆಗಳಲ್ಲೂ ಮಹಿಳಾ ಮೀಸಲಾತಿಗಾಗಿ ಸ್ತ್ರೀಶಕ್ತಿ ಸಂಘಟನೆಗಳು ಹೋರಾಡಬೇಕಿದೆ. ಮಧ್ಯಮ ಮತ್ತು ಉನ್ನತ ವರ್ಗಗಳಲ್ಲಿರುವ ಮಹಿಳೆಯರು ಸಾಕಷ್ಟು ಮಟ್ಟಿಗೆ ಸಬಲರಾಗಿದ್ದಾರೆ. ಸರ್ಕಾರದ ಮಹಿಳಾ ಪರ ಯೋಜನೆಗಳೆಲ್ಲವೂ ತಳ ಸಮುದಾಯದ ಮಹಿಳೆಯರಿಗೆ ತಲುಪಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರಿ ನೌಕರರು ಕಾರ್ಯನಿರ್ವಹಿಸಬೇಕಿದೆ~ ಎಂದು ಹೇಳಿದರು.<br /> <br /> ಬಿಜೆಪಿ ರಾಷ್ಟ್ರೀಯ ವಕ್ತಾರರಾದ ನಿರ್ಮಲಾ ಸೀತಾರಾಮನ್ ಮಾತನಾಡಿ, `ರಾಜ್ಯದ ಒಟ್ಟು 33 ಸರ್ಕಾರಿ ಇಲಾಖೆಗಳಲ್ಲಿ ಮಹಿಳೆಯರಿಗೆ ವಿಶೇಷ ಅನುದಾನ ಒದಗಿಸಬೇಕು ಮತ್ತು ಈವರೆಗೆ ಬಿಡುಗಡೆಯಾದ ಅನುದಾನವು ಮಹಿಳೆಯರ ಕಲ್ಯಾಣಕ್ಕೆ ವಿನಿಯೋಗವಾಗಿರುವ ಬಗ್ಗೆ ಸರ್ಕಾರ ಕೂಲಕಂಷವಾಗಿ ಪರಿಶೀಲಿಸಬೇಕು~ ಎಂದು ಹೇಳಿದರು. <br /> <br /> `ಕೇಂದ್ರ ಸರ್ಕಾರವು ಮಹಿಳಾಪರ ಯೋಜನೆಗಳಿಗೆ ಬಿಡುಗಡೆಗೊಳಿಸುವ ಅನುದಾನವು ಗ್ರಾಮೀಣ ಭಾಗದಲ್ಲಿ ಕಟ್ಟಕಡೆಯ ಮಹಿಳೆಗೆ ತಲುಪಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ನಿಗಾವಹಿಸಬೇಕು~ ಎಂದು ಸಲಹೆ ನೀಡಿದರು. <br /> <br /> ವಿಧಾನ ಪರಿಷತ್ತಿನ ಉಪಸಭಾಪತಿ ವಿಮಲಾಗೌಡ ಮಾತನಾಡಿ, `ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಹಿಳೆಯರಿಗೆ ಆಹ್ವಾನ ನೀಡುವ ಪರಿಪಾಠವನ್ನು ಬಿಜೆಪಿ ಸರ್ಕಾರ ಮುಂದುವರಿಸಬೇಕಿದೆ. ಚರ್ಚೆಯಲ್ಲಿ ಹೊರಬೀಳುವ ನಿರ್ಧಾರಗಳನ್ನು ಅನುಷ್ಠಾನ ಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು~ ಎಂದು ಕಿವಿಮಾತು ಹೇಳಿದರು. <br /> <br /> ಶಾಸಕರಾದ ಕಲ್ಪನಾ ಎಂ.ಎಸ್.ಸಿದ್ದರಾಜು, ಎಂ. ಸತೀಶ್ ರೆಡ್ಡಿ, ನಿಗಮದ ಅಧ್ಯಕ್ಷೆ ಸರೋಜಿನಿ ಭಾರದ್ವಾಜ್ ಇತರರು ಉಪಸ್ಥಿತರಿದ್ದರು. <br /> <br /> <strong>ದೌರ್ಜನ್ಯಗಳಿಗೆ ತುಂಡುಡುಗೆಗಳೇ ಕಾರಣ: ವಿಮಲಾಗೌಡ</strong><br /> `ಮಹಿಳೆಯರ ಮೇಲೆ ನಡೆಯುತ್ತಿರುವ ಬಹುತೇಕ ದೌರ್ಜನ್ಯಗಳಿಗೆ ಅವರು ಧರಿಸುತ್ತಿರುವ ತುಂಡುಡುಗೆಗಳೇ ಕಾರಣ~ ಎಂದು ವಿಧಾನ ಪರಿಷತ್ತಿನ ಉಪಸಭಾಪತಿ ವಿಮಲಾಗೌಡ ಅಭಿಪ್ರಾಯಪಟ್ಟರು. <br /> <br /> `ಸಮಾಜದಲ್ಲಿ ಮಹಿಳೆಯರು ಗೌರವಯುತವಾಗಿ ಬದುಕಲು ತುಂಡುಡುಗೆ ಧರಿಸುವುದನ್ನು ನಿಲ್ಲಿಸಬೇಕು. ಈ ದಿಸೆಯಲ್ಲಿ ವಸ್ತ್ರಸಂಹಿತೆ ಜಾರಿಯಾದರೆ ಒಳ್ಳೆಯದು~ ಎಂದರು. <br /> <br /> `ಭಾರತೀಯ ಸಂಸ್ಕೃತಿಯಂತೆ ಮಹಿಳೆಯರು ನಡೆದುಕೊಂಡರೆ ಆಕೆಯ ಚಾರಿತ್ರ್ಯಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ. ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ವಸ್ತ್ರಗಳು ಮಹಿಳೆಗೆ ಹೆಚ್ಚು ಗೌರವ ನೀಡುತ್ತವೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>