‘ಸಾಮಾನ್ಯವಾಗಿ ಶಿಫಾರಸು ಇಲ್ಲದಿದ್ದರೆ ಯಾವ ಪ್ರಶಸ್ತಿಯೂ ಸಿಗುವುದಿಲ್ಲ ಎಂಬ ಮಾತಿದೆ. ಬಹಳಷ್ಟು ಪ್ರಶಸ್ತಿಗಳ ಕಥೆಯೂ ಇದೇ ಆಗಿದೆ. ಆದರೆ, ರಾಜ್ಯ ಸರ್ಕಾರ ಈ ಪ್ರಶಸ್ತಿ ಆಯ್ಕೆಗೆ ಶಿಫಾರಸನ್ನು ಮಾನದಂಡವಾಗಿ ಪರಿಗಣಿಸದೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಎಲ್ಲ ಪ್ರಶಸ್ತಿಗಳ ಆಯ್ಕೆಗೂ ಇದೇ ಮಾನದಂಡ ಅನುಸರಿಸಬೇಕು’ ಎಂದು ಸಲಹೆ ಮಾಡಿದರು.