ಬೆಂಗಳೂರು: ಆಶಾಕಿರಣ ಕಲಾ ಟ್ರಸ್ಟ್ನ 2018ನೇ ಸಾಲಿನ ‘ಮಾಲತಿಶ್ರೀ ರಂಗಪ್ರಶಸ್ತಿ’ಗೆ ವೃತ್ತಿ ರಂಗಭೂಮಿ ಕಲಾವಿದರಾದ ರುದ್ರಪ್ಪ ಮತ್ತಿಗಟ್ಟಿ (ಗದಗ) ಹಾಗೂ ಪ್ರೇಮಾ ಹೊಸಮನಿ (ತುಮಕೂರು) ಭಾಜನರಾಗಿದ್ದಾರೆ.
ತಲಾ ₹ 10,000 ನಗದು ಮತ್ತು ಫಲಕವನ್ನು ಈ ಪ್ರಶಸ್ತಿ ಒಳಗೊಂಡಿದೆ. ಇದೇ 7ರಂದು ಗೋಕಾಕದಲ್ಲಿ ಚಿತ್ರನಟ ಮಂಡ್ಯ ರಮೇಶ್ ಪ್ರಶಸ್ತಿ ಪ್ರದಾನ ಮಾಡುವರು. ಇದೇ ಸಂದರ್ಭದಲ್ಲಿ ಗುಡಿಹಳ್ಳಿ ನಾಗರಾಜ್ ಸಂಪಾದಕತ್ವದ ‘ರಂಗ ಸಾರ್ಥಕ’ ಕೃತಿ ಬಿಡುಗಡೆಯಾಗಲಿದೆ ಎಂದು ಟ್ರಸ್ಟ್ ತಿಳಿಸಿದೆ.