ನವಲಗುಂದ: ಇಲ್ಲಿನ ವಿಜಯಾ ಬ್ಯಾಂಕಿನಲ್ಲಿ ತನ್ನ ಹೆಂಡತಿಯ ಖಾತೆಯಲ್ಲಿದ್ದ ಹಣ ಕೊಡುವಂತೆ ಕ್ಯಾತೆ ತೆಗೆದ ರೈತನೊಬ್ಬ ಬ್ಯಾಂಕ್ ಅಧಿಕಾರಿಗೆ ಕಪಾಳ ಮೋಕ್ಷ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೇ 10 ರಂದು ಶಂಕರ ಸಂಗಟಿ ಎಂಬ ರೈತ ಮಧ್ಯಾಹ್ನ 2.30 ರ ಸುಮಾರಿಗೆ ತನ್ನ ಹೆಂಡತಿಯ ಖಾತೆಯಲ್ಲಿದ್ದ ಹಣವನ್ನು ಕೊಡುವಂತೆ ಒತ್ತಾಯಿಸಿದ್ದಾನೆ.
ಹೆಂಡತಿಯನ್ನು ಕರೆದುಕೊಂಡು ಬಂದರೆ ಮಾತ್ರ ಹಣ ಕೊಡುವುದಾಗಿ ಬ್ಯಾಂಕ ಸಿಬ್ಬಂದಿ ತಿಳಿಸಿದ್ದಾರೆ. ಈ ವೇಳೆ ರೊಚ್ಚಿಗೆದ್ದ ಶಂಕರ ಸಂಗಟಿ ಬ್ಯಾಂಕ್ ಸಿಬ್ಬಂದಿಯ ಕಪಾಳಕ್ಕೆ ಹೊಡೆದಿದ್ದಾನೆ. ಅಲ್ಲದೆ ಬ್ಯಾಂಕ್ ವ್ಯವಸ್ಥಾಪಕ ಬಾಲಕೃಷ್ಣ ಎಂಬುವರಿಗೂ ಹೊಡೆದಿದ್ದು ಆ ದೃಶ್ಯ ಸಿ.ಸಿ.ಟಿ.ವಿ ಯಲ್ಲಿ ಸೆರೆಯಾಗಿದೆ.
ಈ ವಿಡಿಯೊ ವ್ಯಾಟ್ಸ್ಆ್ಯಪ್ಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.