ಲಕ್ಷ್ಮಣೇಗೌಡ ಎಂಬುವರ ಜಮೀನಿನಲ್ಲಿ ಹತ್ತಿ ಬೆಳೆಯಲಾಗಿದ್ದು, ಕಾಡುಹಂದಿ ಹಾವಳಿ ತಡೆಗೆ ಜಮೀನಿನ ಸುತ್ತ ತಂತಿಬೇಲಿ ಹಾಕಿದ್ದರು. ಇದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, ಸ್ಪರ್ಶಿಸಿದ ಆನೆ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆನೆಗೆ 52–55 ವರ್ಷ ವಯಸ್ಸಾಗಿತ್ತು ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹೇಳಿದ್ದಾರೆ.