<p><strong>ವಿಜಾಪುರ: </strong>ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಅಂಗವಿಕಲರಿಗೆ ಉಚಿತ ಸಾರಿಗೆ ಸೌಕರ್ಯಕ್ಕೆ ಸ್ಥಳೀಯರು ಮುಂದಾಗಿದ್ದಾರೆ. ಆಹ್ವಾನಿತ ಸಾಹಿತಿಗಳು-ಗಣ್ಯರಿಗೆ ಟಾಂಗಾ ಸವಾರಿ ಯೋಗ ಲಭಿಸಲಿದೆ!<br /> <br /> ವಿವಿಧೆಡೆಯಿಂದ ಆಗಮಿಸುವ ಅಂಗವಿಕಲರಿಗೆ ಉಚಿತ ವಾಹನ ಸೌಲಭ್ಯ ಕಲ್ಪಿಸಲು `ರಾಜ್ಯ ವಿಕಲಚೇತನರ ಹೋರಾಟ ಸಮಿತಿ'ಯ ಸ್ಥಳೀಯ ಘಟಕ ಮುಂದೆ ಬಂದಿದೆ. ನಗರದ 25 ಮಂದಿ ಅಂಗವಿಕಲ ಯುವಕರು, ತಮ್ಮಂತೆಯೇ ಅಂಗವೈಕಲ್ಯದ ತೊಂದರೆ ಅನುಭವಿಸುತ್ತಿರುವವರಿಗೆ ಈ ಮಾನವೀಯ ಸೇವೆ ನೀಡಲಿದ್ದಾರೆ.<br /> <br /> `ವಿಶೇಷ ವಿನ್ಯಾಸದ 25 ಸ್ಕೂಟರ್ಗಳು ನಮ್ಮ ಬಳಿ ಇವೆ. ಈ ಸ್ಕೂಟರ್ಗಳಲ್ಲಿ ತಲಾ ಒಬ್ಬೊಬ್ಬ ಸಹ ಸವಾರರನ್ನು ಕರೆದೊಯ್ಯಲು ಅವಕಾಶವಿದೆ. ರೈಲು ಹಾಗೂ ಬಸ್ ನಿಲ್ದಾಣಗಳಿಂದ ಸಮ್ಮೇಳನದ ಸ್ಥಳಕ್ಕೆ ಅಂಗವಿಕಲರನ್ನು ಕರೆದೊಯ್ದು ಮತ್ತು ಅವರನ್ನು ವಾಪಸ್ ತಂದು ಬಿಡುತ್ತೇವೆ' ಎನ್ನುತ್ತಾರೆ ಈ ಸಂಘದ ಮುಖಂಡ ಪರಶುರಾಮ ಗುನ್ನಾಪುರ.<br /> <br /> `ಈ ಸೇವೆ ಒದಗಿಸಲು ನಾವೆಲ್ಲ ನಮ್ಮ ಸ್ವಂತ ಖರ್ಚಿನಲ್ಲಿ ಟಿ ಶರ್ಟ್ ಖರೀದಿಸಿದ್ದೇವೆ. ನಮ್ಮ ಸ್ಕೂಟರ್ಗಳಿಗೆ ನಾವೇ ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದೇವೆ. ಈ ಸೇವೆಗಾಗಿ ನಮ್ಮ ದುಡಿಮೆಯ ಹಣ ವಿನಿಯೋಗಿಸುತ್ತಿದ್ದೇವೆ' ಎನ್ನುತ್ತಾರೆ ಸುರೇಶ ಚವ್ಹಾಣ, ಅಶೋಕ ವಾಲೀಕಾರ.<br /> <br /> <strong>ಟಾಂಗಾ ಸವಾರಿ: </strong>ಆಟೊ ಮತ್ತಿತರ ವಾಹನಗಳ ಭರಾಟೆಯ ಮಧ್ಯೆಯೂ ಟಾಂಗಾಗಳನ್ನು (ಕುದುರೆ ಗಾಡಿ) ಉಳಿಸಿಕೊಂಡಿರುವುದು ವಿಜಾಪುರ ಟಾಂಗಾವಾಲಾಗಳ ಹೆಗ್ಗಳಿಕೆ. ಟಾಂಗಾಗಳಲ್ಲಿ ಕುಳಿತು ದಾರಿಯುದ್ದಕ್ಕೂ ಕಾಣಸಿಗುವ ಸ್ಮಾರಕಗಳನ್ನು ನೋಡುತ್ತ ಸಾಗುವುದೇ ಒಂದು ಅಪರೂಪದ ಅನುಭವ ಆಗಲಿದೆ.<br /> <br /> `ಸಾಹಿತ್ಯ ಸಮ್ಮೇಳನದ ವಿವಿಧ ಗೋಷ್ಠಿಗಳಿಗೆ ಆಹ್ವಾನಿಸಿರುವ ಸಾಹಿತಿಗಳು, ಗಣ್ಯರನ್ನು ರೈಲ್ವೆ, ಬಸ್ ನಿಲ್ದಾಣಗಳಿಂದ ವೇದಿಕೆ ಹಾಗೂ ವಸತಿ ನಿಲಯಗಳಿಗೆ ಕರೆದೊಯ್ಯಲು ಈ ಟಾಂಗಾಗಳ ವ್ಯವಸ್ಥೆ ಮಾಡಿದ್ದೇವೆ. ಇದೇ 8 ಮತ್ತು 9ರಂದು ಎರಡು ದಿನಗಳ ಕಾಲ ಟಾಂಗಾ ಸವಾರಿ ಸೌಲಭ್ಯ ಲಭ್ಯ. ಬಸ್- ರೈಲು ನಿಲ್ದಾಣ, ಸಮ್ಮೇಳನ ಸ್ಥಳದಲ್ಲಿರುವ ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಿ ಟಾಂಗಾ ಸವಾರಿ ಮಾಡಬಹುದು' ಎನ್ನುತ್ತಾರೆ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ, ಶಾಸಕ ಅಪ್ಪು ಪಟ್ಟಣಶೆಟ್ಟಿ.<br /> <br /> `ನಾವು ಕಡುಬಡವರು. ಸಾಹಿತಿಗಳ ಸೇವೆ ಒದಗಿಸುವ ಅವಕಾಶ ಲಭಿಸಿರುವುದು ನಮ್ಮ ಸುಯೋಗ. ಟಾಂಗಾ ಮತ್ತು ಕುದುರೆಗಳಿಗೆ ವಿಶೇಷ ಅಲಂಕಾರ ಮಾಡಿಕೊಂಡು ಸನ್ನದ್ಧರಾಗಿದ್ದೇವೆ' ಎಂದು ಟಾಂಗಾವಾಲಾ ಮೈನೂಸಾಬ್ ಜಮಖಾನೆ ಸಂತಸ ವ್ಯಕ್ತಪಡಿಸಿದ್ದಾರೆ.</p>.<p><strong>ಅಂಗವಿಕಲರಿಗೆ ವಿಐಪಿ ಪಾಸ್</strong><br /> `ಸಮ್ಮೇಳನಕ್ಕೆ ಬರುವ ಅಂಗವಿಕಲರಿಗಾಗಿ 150 ವಿಐಪಿ ಪಾಸ್ ನೀಡುವುದಾಗಿ ಸ್ವಾಗತ ಸಮಿತಿ ಭರವಸೆ ನೀಡಿದೆ. ಹೀಗಾಗಿ ಅಂಗವಿಕಲರಿಗೆ ವಿಐಪಿ ಆತಿಥ್ಯ ದೊರೆಯಲಿದೆ. ಇದೇ 8ರಂದು ಬೆಳಿಗ್ಗೆ 10ರಿಂದ ಆರಂಭವಾಗುವ ಈ ಸೇವೆ ಸಮ್ಮೇಳನದ ಕೊನೆಯ ದಿನದವರೆಗೂ ಇರಲಿದೆ. ನಮ್ಮ ಸೇವೆಯ ಅಗತ್ಯವಿರುವವರು ಮೊಬೈಲ್ 94817-04007 ಸಂಪರ್ಕಿಸಬೇಕು' ಎಂದು ಪರಶುರಾಮ ಗುನ್ನಾಪುರ ಮನವಿ ಮಾಡಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಾಪುರ: </strong>ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಅಂಗವಿಕಲರಿಗೆ ಉಚಿತ ಸಾರಿಗೆ ಸೌಕರ್ಯಕ್ಕೆ ಸ್ಥಳೀಯರು ಮುಂದಾಗಿದ್ದಾರೆ. ಆಹ್ವಾನಿತ ಸಾಹಿತಿಗಳು-ಗಣ್ಯರಿಗೆ ಟಾಂಗಾ ಸವಾರಿ ಯೋಗ ಲಭಿಸಲಿದೆ!<br /> <br /> ವಿವಿಧೆಡೆಯಿಂದ ಆಗಮಿಸುವ ಅಂಗವಿಕಲರಿಗೆ ಉಚಿತ ವಾಹನ ಸೌಲಭ್ಯ ಕಲ್ಪಿಸಲು `ರಾಜ್ಯ ವಿಕಲಚೇತನರ ಹೋರಾಟ ಸಮಿತಿ'ಯ ಸ್ಥಳೀಯ ಘಟಕ ಮುಂದೆ ಬಂದಿದೆ. ನಗರದ 25 ಮಂದಿ ಅಂಗವಿಕಲ ಯುವಕರು, ತಮ್ಮಂತೆಯೇ ಅಂಗವೈಕಲ್ಯದ ತೊಂದರೆ ಅನುಭವಿಸುತ್ತಿರುವವರಿಗೆ ಈ ಮಾನವೀಯ ಸೇವೆ ನೀಡಲಿದ್ದಾರೆ.<br /> <br /> `ವಿಶೇಷ ವಿನ್ಯಾಸದ 25 ಸ್ಕೂಟರ್ಗಳು ನಮ್ಮ ಬಳಿ ಇವೆ. ಈ ಸ್ಕೂಟರ್ಗಳಲ್ಲಿ ತಲಾ ಒಬ್ಬೊಬ್ಬ ಸಹ ಸವಾರರನ್ನು ಕರೆದೊಯ್ಯಲು ಅವಕಾಶವಿದೆ. ರೈಲು ಹಾಗೂ ಬಸ್ ನಿಲ್ದಾಣಗಳಿಂದ ಸಮ್ಮೇಳನದ ಸ್ಥಳಕ್ಕೆ ಅಂಗವಿಕಲರನ್ನು ಕರೆದೊಯ್ದು ಮತ್ತು ಅವರನ್ನು ವಾಪಸ್ ತಂದು ಬಿಡುತ್ತೇವೆ' ಎನ್ನುತ್ತಾರೆ ಈ ಸಂಘದ ಮುಖಂಡ ಪರಶುರಾಮ ಗುನ್ನಾಪುರ.<br /> <br /> `ಈ ಸೇವೆ ಒದಗಿಸಲು ನಾವೆಲ್ಲ ನಮ್ಮ ಸ್ವಂತ ಖರ್ಚಿನಲ್ಲಿ ಟಿ ಶರ್ಟ್ ಖರೀದಿಸಿದ್ದೇವೆ. ನಮ್ಮ ಸ್ಕೂಟರ್ಗಳಿಗೆ ನಾವೇ ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದೇವೆ. ಈ ಸೇವೆಗಾಗಿ ನಮ್ಮ ದುಡಿಮೆಯ ಹಣ ವಿನಿಯೋಗಿಸುತ್ತಿದ್ದೇವೆ' ಎನ್ನುತ್ತಾರೆ ಸುರೇಶ ಚವ್ಹಾಣ, ಅಶೋಕ ವಾಲೀಕಾರ.<br /> <br /> <strong>ಟಾಂಗಾ ಸವಾರಿ: </strong>ಆಟೊ ಮತ್ತಿತರ ವಾಹನಗಳ ಭರಾಟೆಯ ಮಧ್ಯೆಯೂ ಟಾಂಗಾಗಳನ್ನು (ಕುದುರೆ ಗಾಡಿ) ಉಳಿಸಿಕೊಂಡಿರುವುದು ವಿಜಾಪುರ ಟಾಂಗಾವಾಲಾಗಳ ಹೆಗ್ಗಳಿಕೆ. ಟಾಂಗಾಗಳಲ್ಲಿ ಕುಳಿತು ದಾರಿಯುದ್ದಕ್ಕೂ ಕಾಣಸಿಗುವ ಸ್ಮಾರಕಗಳನ್ನು ನೋಡುತ್ತ ಸಾಗುವುದೇ ಒಂದು ಅಪರೂಪದ ಅನುಭವ ಆಗಲಿದೆ.<br /> <br /> `ಸಾಹಿತ್ಯ ಸಮ್ಮೇಳನದ ವಿವಿಧ ಗೋಷ್ಠಿಗಳಿಗೆ ಆಹ್ವಾನಿಸಿರುವ ಸಾಹಿತಿಗಳು, ಗಣ್ಯರನ್ನು ರೈಲ್ವೆ, ಬಸ್ ನಿಲ್ದಾಣಗಳಿಂದ ವೇದಿಕೆ ಹಾಗೂ ವಸತಿ ನಿಲಯಗಳಿಗೆ ಕರೆದೊಯ್ಯಲು ಈ ಟಾಂಗಾಗಳ ವ್ಯವಸ್ಥೆ ಮಾಡಿದ್ದೇವೆ. ಇದೇ 8 ಮತ್ತು 9ರಂದು ಎರಡು ದಿನಗಳ ಕಾಲ ಟಾಂಗಾ ಸವಾರಿ ಸೌಲಭ್ಯ ಲಭ್ಯ. ಬಸ್- ರೈಲು ನಿಲ್ದಾಣ, ಸಮ್ಮೇಳನ ಸ್ಥಳದಲ್ಲಿರುವ ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಿ ಟಾಂಗಾ ಸವಾರಿ ಮಾಡಬಹುದು' ಎನ್ನುತ್ತಾರೆ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ, ಶಾಸಕ ಅಪ್ಪು ಪಟ್ಟಣಶೆಟ್ಟಿ.<br /> <br /> `ನಾವು ಕಡುಬಡವರು. ಸಾಹಿತಿಗಳ ಸೇವೆ ಒದಗಿಸುವ ಅವಕಾಶ ಲಭಿಸಿರುವುದು ನಮ್ಮ ಸುಯೋಗ. ಟಾಂಗಾ ಮತ್ತು ಕುದುರೆಗಳಿಗೆ ವಿಶೇಷ ಅಲಂಕಾರ ಮಾಡಿಕೊಂಡು ಸನ್ನದ್ಧರಾಗಿದ್ದೇವೆ' ಎಂದು ಟಾಂಗಾವಾಲಾ ಮೈನೂಸಾಬ್ ಜಮಖಾನೆ ಸಂತಸ ವ್ಯಕ್ತಪಡಿಸಿದ್ದಾರೆ.</p>.<p><strong>ಅಂಗವಿಕಲರಿಗೆ ವಿಐಪಿ ಪಾಸ್</strong><br /> `ಸಮ್ಮೇಳನಕ್ಕೆ ಬರುವ ಅಂಗವಿಕಲರಿಗಾಗಿ 150 ವಿಐಪಿ ಪಾಸ್ ನೀಡುವುದಾಗಿ ಸ್ವಾಗತ ಸಮಿತಿ ಭರವಸೆ ನೀಡಿದೆ. ಹೀಗಾಗಿ ಅಂಗವಿಕಲರಿಗೆ ವಿಐಪಿ ಆತಿಥ್ಯ ದೊರೆಯಲಿದೆ. ಇದೇ 8ರಂದು ಬೆಳಿಗ್ಗೆ 10ರಿಂದ ಆರಂಭವಾಗುವ ಈ ಸೇವೆ ಸಮ್ಮೇಳನದ ಕೊನೆಯ ದಿನದವರೆಗೂ ಇರಲಿದೆ. ನಮ್ಮ ಸೇವೆಯ ಅಗತ್ಯವಿರುವವರು ಮೊಬೈಲ್ 94817-04007 ಸಂಪರ್ಕಿಸಬೇಕು' ಎಂದು ಪರಶುರಾಮ ಗುನ್ನಾಪುರ ಮನವಿ ಮಾಡಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>