ಅಧಿಕಾರಿಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳೊಂದಿಗೆ ಭಾನುವಾರ ಇಲ್ಲಿ ಸಭೆ ನಡೆಸಿದ ಸಚಿವರು, ಸಮ್ಮೇಳನದ ಸಿದ್ಧತೆಯನ್ನು ಪರಿಶೀಲಿಸಿದರು.
ಮೂರು ದಿನಗಳ ಸಮ್ಮೇಳನದಲ್ಲಿ ಒಟ್ಟು 3.62 ಲಕ್ಷ ಜನರಿಗೆ ಊಟ ಮತ್ತು ತಿಂಡಿಯ ವ್ಯವಸ್ಥೆ ಮಾಡಲಾಗಿದೆ. ಮಹಾರಾಜ ಕಾಲೇಜು ಮೈದಾನ, ಸ್ಕೌಟ್ಸ್ ಅಂಡ್ ಗೈಡ್ ಮೈದಾನ ಹಾಗೂ ಓವೆಲ್ ಮೈದಾನದಲ್ಲಿ 200 ಕೌಂಟರುಗಳನ್ನು ತೆರೆಯಲಾಗುತ್ತಿದೆ. ರಾಗಿಮುದ್ದೆ, ಜೋಳದ ರೊಟ್ಟಿ, ಸಿರಿಧಾನ್ಯದ ಪಾಯಸ, ಮೈಸೂರು ಪಾಕ್, ಕುಚಲಕ್ಕಿ ಅನ್ನ, ಈರನಗೆರೆ ಬದನೆಕಾಯಿ ಪಲ್ಯ ಹಾಗೂ ಮೇಲುಕೋಟೆ ಪುಳಿಯೊಗರೆ ಸೇರಿ ತರಹೇವಾರಿ ಖಾದ್ಯದ ಪಟ್ಟಿ ಸಿದ್ಧವಾಗಿದೆ.