ತುಮಕೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಕುರುಬರ ಮಾಲೀಕ ಅಲ್ಲ; ನಾಡಿನ ಜನರ ಮಾಲೀಕರೂ ಅಲ್ಲ’ ಎಂದು ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್ ತಿರುಗೇಟು ನೀಡಿದರು.
ವಿಶ್ವನಾಥ್ ಅವರಿಗೆ ಸಮುದಾಯವರು ಮತ ಹಾಕಬಾರದು ಎಂದು ಮೈಸೂರಿನಲ್ಲಿ ಸಮುದಾಯದ ಮುಖಂಡರ ಸಭೆಯಲ್ಲಿ ಮುಖ್ಯಮಂತ್ರಿ ಹೇಳಿದ್ದಾರೆ ಎನ್ನಲಾದ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು ‘ಸಿದ್ದರಾಮಯ್ಯಗೆ ದರ್ಪ, ದುರಹಂಕಾರ. ದುಡ್ಡು ಅವರನ್ನು ಈ ರೀತಿ ಮಾಡಿದೆ’ ಎಂದರು.