<p><strong>ದಸರೆಯಲ್ಲಿ ಸರ್ಕಾರ ಭಾಗವಹಿಸದು: ಜಂಬೂಸವಾರಿ ಇಲ್ಲ</strong></p>.<p>ಬೆಂಗಳೂರು, ಸೆ. 13– ರಾಜ್ಯ ಸರ್ಕಾರ ಭಾಗವಹಿಸದ ಕಾರಣ ದಸರಾದ ಪ್ರಮುಖ ಆಕರ್ಷಣೆಗಳಾದ ದರ್ಬಾರ್ ಜಂಬೂಸವಾರಿ ಹಾಗೂ ಟಾರ್ಚ್ಲೈಟ್ ಪರೇಡ್ ಉತ್ಸವಗಳು ನಡೆಯದಿರುವುದು ಖಚಿತವಾದಂತಾಗಿದೆ.</p>.<p>ಈ ಉತ್ಸವಗಳನ್ನು ಮಾಜಿ ಮಹಾರಾಜರು ಸರ್ಕಾರದ ಯಾವ ಪಾತ್ರವೂ ಇಲ್ಲದೆ ಖಾಸಗಿಯಾಗಿ ಆಚರಿಸಿಕೊಳ್ಳಲು ಅವಕಾಶವಿದೆ.</p>.<p>ಆದರೆ, ಖಾಸಗಿಯಾಗಿ ಈ ಉತ್ಸವಗಳನ್ನು ಜರುಗಿಸಲು ಶ್ರೀ ಜಯಚಾಮರಾಜ ಒಡೆಯರ್ ಅವರಿಗೆ ಇಷ್ಟವಿಲ್ಲ ಎಂಬ ಭಾವನೆ ತಮಗೆ ಮೂಡೆತೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಮಾಜಿ ಮಹಾರಾಜರನ್ನು ಭೇಟಿ ಮಾಡಿದ ನಂತರ ವರದಿಗಾರರಿಗೆ ತಿಳಿಸಿದರು.</p>.<p><strong>ವಿದ್ಯುತ್ ಯೋಜನೆಗಳ ರಾಷ್ಟ್ರೀಯ ಜಾಲ ರಚನೆಗೆ ಗಿರಿ ಸಲಹೆ</strong></p>.<p>ಬೆಂಗಳೂರು, ಸೆ. 12– ನಾನಾ ರಾಜ್ಯಗಳ ವಿದ್ಯುಚ್ಛಕ್ತಿ ಅಭಿವೃದ್ಧಿ ಯೋಜನೆಗಳನ್ನು ಸಂಯೋಜಿಸಿ ಈ ಯೋಜನೆಗಳ ರಾಷ್ಟ್ರೀಯ ಜಾಲವನ್ನು ರೂಪಿಸಬೇಕೆಂದು ರಾಷ್ಟ್ರಪತಿ ಶ್ರೀ ವಿ.ವಿ ಗಿರಿಯವರು ಇಂದು ಇಲ್ಲಿ ಸಲಹೆ ಮಾಡಿದರು.</p>.<p>‘ಈ ರೀತಿ ವ್ಯವಸ್ಥೆಯಿಂದ ದೇಶದ ಎಲ್ಲ ಭಾಗಗಳಿಗೂ ಸಾಕಷ್ಟು ವಿದ್ಯುಚ್ಛಕ್ತಿ ದೊರಕಿ ಕೆಲವೆಡೆ ವಿದ್ಯುಚ್ಛಕ್ತಿಯ ಅಭಾವ ಮತ್ತೆ ಕೆಲವೆಡೆ ಬೇಡಿಕೆಗಿಂತ ಅಧಿಕ ವಿದ್ಯುಚ್ಛಕ್ತಿ ಇರುವ ಸ್ಥಿತಿ ತಪ್ಪುತ್ತೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಸರೆಯಲ್ಲಿ ಸರ್ಕಾರ ಭಾಗವಹಿಸದು: ಜಂಬೂಸವಾರಿ ಇಲ್ಲ</strong></p>.<p>ಬೆಂಗಳೂರು, ಸೆ. 13– ರಾಜ್ಯ ಸರ್ಕಾರ ಭಾಗವಹಿಸದ ಕಾರಣ ದಸರಾದ ಪ್ರಮುಖ ಆಕರ್ಷಣೆಗಳಾದ ದರ್ಬಾರ್ ಜಂಬೂಸವಾರಿ ಹಾಗೂ ಟಾರ್ಚ್ಲೈಟ್ ಪರೇಡ್ ಉತ್ಸವಗಳು ನಡೆಯದಿರುವುದು ಖಚಿತವಾದಂತಾಗಿದೆ.</p>.<p>ಈ ಉತ್ಸವಗಳನ್ನು ಮಾಜಿ ಮಹಾರಾಜರು ಸರ್ಕಾರದ ಯಾವ ಪಾತ್ರವೂ ಇಲ್ಲದೆ ಖಾಸಗಿಯಾಗಿ ಆಚರಿಸಿಕೊಳ್ಳಲು ಅವಕಾಶವಿದೆ.</p>.<p>ಆದರೆ, ಖಾಸಗಿಯಾಗಿ ಈ ಉತ್ಸವಗಳನ್ನು ಜರುಗಿಸಲು ಶ್ರೀ ಜಯಚಾಮರಾಜ ಒಡೆಯರ್ ಅವರಿಗೆ ಇಷ್ಟವಿಲ್ಲ ಎಂಬ ಭಾವನೆ ತಮಗೆ ಮೂಡೆತೆಂದು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ಮಾಜಿ ಮಹಾರಾಜರನ್ನು ಭೇಟಿ ಮಾಡಿದ ನಂತರ ವರದಿಗಾರರಿಗೆ ತಿಳಿಸಿದರು.</p>.<p><strong>ವಿದ್ಯುತ್ ಯೋಜನೆಗಳ ರಾಷ್ಟ್ರೀಯ ಜಾಲ ರಚನೆಗೆ ಗಿರಿ ಸಲಹೆ</strong></p>.<p>ಬೆಂಗಳೂರು, ಸೆ. 12– ನಾನಾ ರಾಜ್ಯಗಳ ವಿದ್ಯುಚ್ಛಕ್ತಿ ಅಭಿವೃದ್ಧಿ ಯೋಜನೆಗಳನ್ನು ಸಂಯೋಜಿಸಿ ಈ ಯೋಜನೆಗಳ ರಾಷ್ಟ್ರೀಯ ಜಾಲವನ್ನು ರೂಪಿಸಬೇಕೆಂದು ರಾಷ್ಟ್ರಪತಿ ಶ್ರೀ ವಿ.ವಿ ಗಿರಿಯವರು ಇಂದು ಇಲ್ಲಿ ಸಲಹೆ ಮಾಡಿದರು.</p>.<p>‘ಈ ರೀತಿ ವ್ಯವಸ್ಥೆಯಿಂದ ದೇಶದ ಎಲ್ಲ ಭಾಗಗಳಿಗೂ ಸಾಕಷ್ಟು ವಿದ್ಯುಚ್ಛಕ್ತಿ ದೊರಕಿ ಕೆಲವೆಡೆ ವಿದ್ಯುಚ್ಛಕ್ತಿಯ ಅಭಾವ ಮತ್ತೆ ಕೆಲವೆಡೆ ಬೇಡಿಕೆಗಿಂತ ಅಧಿಕ ವಿದ್ಯುಚ್ಛಕ್ತಿ ಇರುವ ಸ್ಥಿತಿ ತಪ್ಪುತ್ತೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>