ಆಗ್ನೇಯ ಇಂಗ್ಲೆಂಡ್ನ ಸ್ಲಫ್ನ ಸಂಸದ ತನ್ಮನ್ಜೀತ್ ಸಿಂಗ್ ಧೇಸಿ, ‘ಕೆನಡಾದಿಂದ ಬರುತ್ತಿರುವ ವರದಿಗಳು ಆಘಾತ ಮೂಡಿಸಿವೆ. ನನ್ನ ಕ್ಷೇತ್ರ ಸ್ಲಫ್ ಮತ್ತು ಇತರೆಡೆಗಳಿಂದ ಕರೆಗಳು ಬರುತ್ತಿವೆ. ಎಲ್ಲರಲ್ಲೂ ಆತಂಕ, ಕೋಪ, ಭಯವಿದೆ. ಪ್ರಕರಣದ ವಿಚಾರವಾಗಿ ಮಿತ್ರರಾಷ್ಟ್ರಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಕೆನಡಾ ಪ್ರಧಾನಿ ಹೇಳಿದ್ದಾರೆ. ಆದ್ದರಿಂದ, ನ್ಯಾಯ ಪಡೆಯಲು ನಾವು ಬ್ರಿಟನ್ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ’ ಎಂದು ಹೇಳಿದ್ದಾರೆ.