<p><strong>ಬಾಕು(ಅಜರ್ಬೈಜಾನ್)</strong>: ಭೂಗೋಳದ ದಕ್ಷಿಣದ ದೇಶಗಳಿಗಾಗಿ ವಿಶ್ವಸಂಸ್ಥೆಯ ಹವಾಮಾನ ಸಮಾವೇಶವು ಘೋಷಿಸಿರುವ ವಾರ್ಷಿಕ ಅಂದಾಜು ₹25 ಸಾವಿರ ಕೋಟಿ (300 ಶತಕೋಟಿ ಡಾಲರ್) ಮೊತ್ತದ ‘ಹವಾಮಾನ ಹಣಕಾಸು ಪ್ಯಾಕೇಜ್’ ಅನ್ನು ಭಾರತ ಸಾರಾಸಗಟಾಗಿ ತಿರಸ್ಕರಿಸಿದೆ.</p>.<p>‘ಬಡ ದೇಶಗಳಿಗೆ ಅತ್ಯಲ್ಪ ಮೊತ್ತದ ಪ್ಯಾಕೇಜ್ ನೀಡಲಾಗಿದೆ. ಈ ಕುರಿತು ಆಕ್ಷೇಪ ವ್ಯಕ್ತಪಡಿಸಲು ಅವಕಾಶ ನೀಡದಯೇ, ಹವಾಮಾನ ಸಮಾವೇಶದ (ಸಿಒಪಿ29) ಅಧ್ಯಕ್ಷ ವಹಿಸಿರುವ ರಾಷ್ಟ್ರ ಹಾಗೂ ವಿಶ್ವಸಂಸ್ಥೆ ಈ ಪ್ಯಾಕೇಜ್ ಘೋಷಿಸಿವೆ’ ಎಂದು ಭಾರತ ಹೇಳಿದೆ.</p>.<p>ಹವಾಮಾನ ಸಮಾವೇಶದ ಅಂಗವಾಗಿ ನಡೆದ ಸರ್ವಸಾಧಾರಣ ಸಭೆಯಲ್ಲಿ, ಭಾರತದ ಆರ್ಥಿಕ ವ್ಯವಹಾರಗಳ ಇಲಾಖೆ ಸಲಹೆಗಾರ್ತಿ ಚಾಂದಿನಿ ರೈನಾ ಅವರು ಈ ಮಾತು ಹೇಳಿದ್ದಾರೆ.</p>.<p>‘ಈ ಪ್ಯಾಕೇಜ್ ಅನ್ಯಾಯದಿಂದ ಕೂಡಿದೆ ಹಾಗೂ ತಮಗೆ ಅನುಕೂಲವಾಗುವಂತೆ ರೂಪಿಸಲಾಗಿದೆ. ಪ್ಯಾಕೇಜ್ ಅಂಗೀಕರಿಸುವುದಕ್ಕೂ ಮೊದಲು ಈ ವಿಷಯವಾಗಿ ಮಾತನಾಡಬೇಕೆಂಬ ಭಾರತದ ಮನವಿಯನ್ನು ನಿರ್ಲಕ್ಷಿಸಲಾಗಿದೆ. ಈ ಘಟನೆಯಿಂದ ತೀವ್ರ ನಿರಾಸೆಯಾಗಿದೆ’ ಎಂದು ಹೇಳಿದ್ದಾರೆ.</p>.<p>ಭಾರತದ ವಾದವನ್ನು ಬೆಂಬಲಿಸಿ ಮಾತನಾಡಿದ ನೈಜೀರಿಯಾ ಪ್ರತಿನಿಧಿ, ‘300 ಶತಕೋಟಿ ಡಾಲರ್ ಪ್ಯಾಕೇಜ್ ಘೋಷಿಸಿರುವುದು ತಮಾಷೆಯೇ ಸರಿ’ ಎಂದಿದ್ದಾರೆ. ಮಲಾವಿ ಮತ್ತು ಬೊಲಿವಿಯಾ ದೇಶಗಳು ಕೂಡ ಈ ವಿಚಾರವಾಗಿ ಭಾರತವನ್ನು ಬೆಂಬಲಿಸಿವೆ.</p>.<p>ಹವಾಮಾನ ಬದಲಾವಣೆಯಿಂದಾಗುವ ಪರಿಣಾಮಗಳನ್ನು ಎದುರಿಸುವುದಕ್ಕಾಗಿ 1.3 ಟ್ರಿಲಿಯನ್ ಡಾಲರ್ ನೀಡಬೇಕು ಎಂಬುದು ಭೌಗೋಳಿಕವಾಗಿ ದಕ್ಷಿಣದಲ್ಲಿರುವ ರಾಷ್ಟ್ರಗಳ ಬೇಡಿಕೆಯಾಗಿದೆ. </p>.<div><blockquote>ಅಭಿವೃದ್ದಿ ಹೊಂದಿರುವ ರಾಷ್ಟ್ರಗಳು ತಮ್ಮ ಜವಾಬ್ಧಾರಿ ನಿಭಾಯಿಸಲು ಆಸಕ್ತಿ ಹೊಂದಿಲ್ಲ ಎಂಬುದನ್ನು ಈ ಪ್ಯಾಕೇಜ್ ತೋರಿಸಿದೆ</blockquote><span class="attribution">ಚಾಂದಿನಿ ರೈನಾ ಭಾರತದ ಆರ್ಥಿಕ ವ್ಯವಹಾರಗಳ ಇಲಾಖೆ ಸಲಹೆಗಾರ್ತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಕು(ಅಜರ್ಬೈಜಾನ್)</strong>: ಭೂಗೋಳದ ದಕ್ಷಿಣದ ದೇಶಗಳಿಗಾಗಿ ವಿಶ್ವಸಂಸ್ಥೆಯ ಹವಾಮಾನ ಸಮಾವೇಶವು ಘೋಷಿಸಿರುವ ವಾರ್ಷಿಕ ಅಂದಾಜು ₹25 ಸಾವಿರ ಕೋಟಿ (300 ಶತಕೋಟಿ ಡಾಲರ್) ಮೊತ್ತದ ‘ಹವಾಮಾನ ಹಣಕಾಸು ಪ್ಯಾಕೇಜ್’ ಅನ್ನು ಭಾರತ ಸಾರಾಸಗಟಾಗಿ ತಿರಸ್ಕರಿಸಿದೆ.</p>.<p>‘ಬಡ ದೇಶಗಳಿಗೆ ಅತ್ಯಲ್ಪ ಮೊತ್ತದ ಪ್ಯಾಕೇಜ್ ನೀಡಲಾಗಿದೆ. ಈ ಕುರಿತು ಆಕ್ಷೇಪ ವ್ಯಕ್ತಪಡಿಸಲು ಅವಕಾಶ ನೀಡದಯೇ, ಹವಾಮಾನ ಸಮಾವೇಶದ (ಸಿಒಪಿ29) ಅಧ್ಯಕ್ಷ ವಹಿಸಿರುವ ರಾಷ್ಟ್ರ ಹಾಗೂ ವಿಶ್ವಸಂಸ್ಥೆ ಈ ಪ್ಯಾಕೇಜ್ ಘೋಷಿಸಿವೆ’ ಎಂದು ಭಾರತ ಹೇಳಿದೆ.</p>.<p>ಹವಾಮಾನ ಸಮಾವೇಶದ ಅಂಗವಾಗಿ ನಡೆದ ಸರ್ವಸಾಧಾರಣ ಸಭೆಯಲ್ಲಿ, ಭಾರತದ ಆರ್ಥಿಕ ವ್ಯವಹಾರಗಳ ಇಲಾಖೆ ಸಲಹೆಗಾರ್ತಿ ಚಾಂದಿನಿ ರೈನಾ ಅವರು ಈ ಮಾತು ಹೇಳಿದ್ದಾರೆ.</p>.<p>‘ಈ ಪ್ಯಾಕೇಜ್ ಅನ್ಯಾಯದಿಂದ ಕೂಡಿದೆ ಹಾಗೂ ತಮಗೆ ಅನುಕೂಲವಾಗುವಂತೆ ರೂಪಿಸಲಾಗಿದೆ. ಪ್ಯಾಕೇಜ್ ಅಂಗೀಕರಿಸುವುದಕ್ಕೂ ಮೊದಲು ಈ ವಿಷಯವಾಗಿ ಮಾತನಾಡಬೇಕೆಂಬ ಭಾರತದ ಮನವಿಯನ್ನು ನಿರ್ಲಕ್ಷಿಸಲಾಗಿದೆ. ಈ ಘಟನೆಯಿಂದ ತೀವ್ರ ನಿರಾಸೆಯಾಗಿದೆ’ ಎಂದು ಹೇಳಿದ್ದಾರೆ.</p>.<p>ಭಾರತದ ವಾದವನ್ನು ಬೆಂಬಲಿಸಿ ಮಾತನಾಡಿದ ನೈಜೀರಿಯಾ ಪ್ರತಿನಿಧಿ, ‘300 ಶತಕೋಟಿ ಡಾಲರ್ ಪ್ಯಾಕೇಜ್ ಘೋಷಿಸಿರುವುದು ತಮಾಷೆಯೇ ಸರಿ’ ಎಂದಿದ್ದಾರೆ. ಮಲಾವಿ ಮತ್ತು ಬೊಲಿವಿಯಾ ದೇಶಗಳು ಕೂಡ ಈ ವಿಚಾರವಾಗಿ ಭಾರತವನ್ನು ಬೆಂಬಲಿಸಿವೆ.</p>.<p>ಹವಾಮಾನ ಬದಲಾವಣೆಯಿಂದಾಗುವ ಪರಿಣಾಮಗಳನ್ನು ಎದುರಿಸುವುದಕ್ಕಾಗಿ 1.3 ಟ್ರಿಲಿಯನ್ ಡಾಲರ್ ನೀಡಬೇಕು ಎಂಬುದು ಭೌಗೋಳಿಕವಾಗಿ ದಕ್ಷಿಣದಲ್ಲಿರುವ ರಾಷ್ಟ್ರಗಳ ಬೇಡಿಕೆಯಾಗಿದೆ. </p>.<div><blockquote>ಅಭಿವೃದ್ದಿ ಹೊಂದಿರುವ ರಾಷ್ಟ್ರಗಳು ತಮ್ಮ ಜವಾಬ್ಧಾರಿ ನಿಭಾಯಿಸಲು ಆಸಕ್ತಿ ಹೊಂದಿಲ್ಲ ಎಂಬುದನ್ನು ಈ ಪ್ಯಾಕೇಜ್ ತೋರಿಸಿದೆ</blockquote><span class="attribution">ಚಾಂದಿನಿ ರೈನಾ ಭಾರತದ ಆರ್ಥಿಕ ವ್ಯವಹಾರಗಳ ಇಲಾಖೆ ಸಲಹೆಗಾರ್ತಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>