ಮೇ 21ರಂದು, ಲಂಡನ್ನಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ಎಸ್ಕ್ಯೂ321 ವಿಮಾನವು ಮ್ಯಾನ್ಮಾರ್ನ ಐರಾವಡ್ಡಿ ಜಲಾನಯನ ಪ್ರದೇಶದಲ್ಲಿ ಟರ್ಬ್ಯುಲೆನ್ಸ್ನಿಂದಾಗಿ (ಗಾಳಿಯ ವೇಗದಲ್ಲಿ ಆಗುವ ಬದಲಾವಣೆಯಿಂದ ಉಂಟಾಗುವ ಕ್ಷೋಭೆ) ಹಠಾತ್ ಕುಸಿತ ಕಂಡಿತ್ತು. ಈ ವಿಮಾನದಲ್ಲಿ 211 ಪ್ರಯಾಣಿಕರು ಮತ್ತು 18 ಸಿಬ್ಬಂದಿ ಇದ್ದರು. ಘಟನೆಯ ನಂತರ ವಿಮಾನವನ್ನು ಬ್ಯಾಂಕಾಕ್ನ ಸುವರ್ಣಭೂಮಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು.