ಕಠ್ಮಂಡು: ನೇಪಾಳದ ಲಲಿತಪುರ ಜಿಲ್ಲೆಯ ಕೈಗಾರಿಕೆ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ ಆಮ್ಲಜನಕ ಘಟಕ ಸ್ಫೋಟಗೊಂಡ ಭಾರತದ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಗಾಯಗೊಂಡ ಏಳು ಮಂದಿ ಸ್ಥಳೀಯರನ್ನು ಚಿಕಿತ್ಸೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಗರಮಠ ಆಮ್ಲಜನಕ ಘಟಕದಲ್ಲಿ ಕಾರ್ಮಿಕರು ಸಿಲಿಂಡರ್ಗೆ ಅನಿಲ ಭರ್ತಿ ಮಾಡುವ ವೇಳೆ ದುರಂತ ಸಂಭವಿಸಿದೆ. ಸ್ಫೋಟದಿಂದ ಘಟಕದ ಕಟ್ಟಡ ಹಾಗೂ ಸಮೀಪದ ಕಟ್ಟಡಗಳಿಗೂ ಹಾನಿಯಾಗಿದೆ ಎಂದು ಲಲಿತಪುರದ ಎಸ್ಪಿ ಸಿದ್ಧ ಬಿಕ್ರಮ್ ಶಾ ತಿಳಿಸಿದರು.
ಗೃಹ ಸಚಿವ ಬಾಲಕೃಷ್ಣ ಖಂಡ್ ಅವರು ಘಟನೆಯ ತನಿಖೆಗೆ ಸೂಚಿಸಿದ್ದಾರೆ.