‘ರಾಜ್ವಿಂದರ್ ಕಹ್ಲೋನ್ ಬಂಧಿತ ವ್ಯಕ್ತಿ. ಏಪ್ರಿಲ್ 1ರಂದು ಅಂಚೆ ಕಚೇರಿಗೆ ಬಂದೂಕಿನೊಂದಿಗೆ ನುಗ್ಗಿದ ಆರೋಪಿ, ಅಲ್ಲಿನ ಸಿಬ್ಬಂದಿಯನ್ನು ಬೆದರಿಸಿ ಅಪಾರ ಪ್ರಮಾಣದ ಹಣ ಕಳ್ಳತನ ಮಾಡಿದ್ದ ಎಂದು ಹೇಳಲಾಗಿದೆ. ಕಳ್ಳತನವಾದ ಬಗ್ಗೆ ಮಾಹಿತಿ ದೊರೆತ ತಕ್ಷಣವೇ ಪೊಲೀಸರು ಮತ್ತು ಗುಪ್ತಚರ ವಿಭಾಗದವರು ಕಾರ್ಯಪ್ರವೃತ್ತರಾಗಿದ್ದರು’ ಎಂದು ಮೆಟ್ರೊಪಾಲಿಟನ್ ಪೊಲೀಸರು ತಿಳಿಸಿದ್ದಾರೆ.