‘ಪಾಕಿಸ್ತಾನಕ್ಕೆ ಮರಳುವ ಷರೀಫ್ ಅವರನ್ನು ಬಂಧಿಸುವ ಸಾಧ್ಯತೆಯಿಲ್ಲ. ಅವರು ನ್ಯಾಯಾಲಯದಿಂದ ಜಾಮೀನು ಪಡೆಯಲಿದ್ದಾರೆ. ಕಾನೂನುಗಳನ್ನು ಪಾಲಿಸಲಿದ್ದಾರೆ. ಪಿಎಂಎಲ್–ಎನ್ನ ಚಿತ್ತ ಆರ್ಥಿಕತೆಯತ್ತ ಮಾತ್ರ. ಕುಸಿದಿರುವ ಆರ್ಥಿಕ ಸ್ಥಿತಿಯನ್ನು ಪುನಶ್ಚೇತನಗೊಳಿಸುವುದೇ ನವಾಜ್ ಗುರಿಯಾಗಿದೆ’ ಎಂದು ಸೆನೆಟರ್ ಇಶಾಕ್ ದಾರ್ ತಿಳಿಸಿದ್ದಾರೆ.