<p><strong>ಒಟ್ಟಾವ</strong>: ಕೆನಡಾದಲ್ಲಿ ಭಯೋತ್ಪಾದನೆಯನ್ನು ವೈಭವೀಕರಿಸಲು ಆಗಾಗ್ಗೆ ನಡೆಯುತ್ತಿರುವ ಕೃತ್ಯಗಳನ್ನು ‘ವಿಷಾದಕರ’ ಎಂದು ಬಣ್ಣಿಸಿದ ಭಾರತ, ರಾಜಕೀಯ ಲಾಭದ ಉದ್ದೇಶದಿಂದ ತನ್ನ ಗಡಿಯೊಳಗೆ ನಡೆಯುವ ಭಯೋತ್ಪಾದನಾ ಕೃತ್ಯಗಳನ್ನು ಯಾವುದೇ ಸರ್ಕಾರವೂ ಕಡೆಗಣಿಸಬಾರದು ಎಂದು ಪ್ರತಿಪಾದಿಸಿದೆ. </p>.<p>‘ಕಾನಿಷ್ಕ’ ಬಾಂಬ್ ಸ್ಫೋಟ ಘಟನೆಯ 39ನೇ ವರ್ಷಾಚರಣೆ ಅಂಗವಾಗಿ ಕೆನಡಾದಲ್ಲಿರುವ ಭಾರತೀಯ ಹೈಕಮಿಷನರ್ ಕಚೇರಿ ಭಾನುವಾರ ಹೇಳಿಕೆ ಹೊರಡಿಸಿದ್ದು, ‘ಭಯೋತ್ಪಾದನೆಗೆ ಯಾವುದೇ ಗಡಿ, ರಾಷ್ಟ್ರೀಯತೆ ಮತ್ತು ಜನಾಂಗ ಎಂಬುದಿಲ್ಲ’ ಎಂದಿದೆ.</p>.<p>ಕೆನಡಾದ ಮಾಂಟ್ರಿಯಲ್ನಿಂದ ನವದೆಹಲಿಗೆ ಸಂಚರಿಸುತ್ತಿದ್ದ ಏರ್ ಇಂಡಿಯಾದ ‘ಕಾನಿಷ್ಕ’ ವಿಮಾನವನ್ನು ಸಿಖ್ ಉಗ್ರಗಾಮಿಗಳು 1985ರ ಜೂನ್ 23ರಂದು ಸ್ಫೋಟಿಸಿದ್ದರು. ವಿಮಾನದಲ್ಲಿದ್ದ 89 ಮಕ್ಕಳು ಸೇರಿ ಎಲ್ಲ 329 ಜನರು ಮೃತಪಟ್ಟಿದ್ದರು. </p>.<p>‘ಹೇಡಿತನದ ಕೃತ್ಯ ನಡೆದು 39 ವರ್ಷಗಳು ಕಳೆದಿವೆ. ದುರದೃಷ್ಟವಶಾತ್, ಭಯೋತ್ಪಾದನೆಯು ಇಂದು ಕೂಡಾ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆಯಾಗಿಯೇ ಉಳಿದುಕೊಂಡಿದೆ’ ಎಂದು ಪ್ರಕಟಣೆ ತಿಳಿಸಿದೆ.</p>.<p>‘1985ರ ಕಾನಿಷ್ಕ ಘಟನೆ ಸೇರಿದಂತೆ ಭಯೋತ್ಪಾದನೆಯನ್ನು ವೈಭವೀಕರಿಸುವ ಯಾವುದೇ ಕೃತ್ಯ ವಿಷಾದನೀಯ. ಶಾಂತಿಯನ್ನು ಬಯಸುವ ಎಲ್ಲ ದೇಶಗಳು ಮತ್ತು ಜನರು ಅದನ್ನು ಖಂಡಿಸಬೇಕು’ ಎಂದು ಹೇಳಿದೆ.</p>.<p>ಈ ದುರಂತ ಘಟನೆಯನ್ನು ಸ್ಮರಿಸಲು ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತದ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ, ‘ಕ್ಷಣಿಕ ರಾಜಕೀಯ ಹಿತಾಸಕ್ತಿಗಿಂತ ಮಾನವ ಜೀವನವು ಹೆಚ್ಚು ಮುಖ್ಯವಾಗಿದೆ. ಭಯೋತ್ಪಾದಕ ಚಟುವಟಿಕೆಗಳು ಮಾನವೀಯತೆಗೆ ಹಾನಿಕರವಾಗುವ ಮುನ್ನವೇ ಅದನ್ನು ಹೊಸಕಿಹಾಕುವುದು ಅಗತ್ಯ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಒಟ್ಟಾವ</strong>: ಕೆನಡಾದಲ್ಲಿ ಭಯೋತ್ಪಾದನೆಯನ್ನು ವೈಭವೀಕರಿಸಲು ಆಗಾಗ್ಗೆ ನಡೆಯುತ್ತಿರುವ ಕೃತ್ಯಗಳನ್ನು ‘ವಿಷಾದಕರ’ ಎಂದು ಬಣ್ಣಿಸಿದ ಭಾರತ, ರಾಜಕೀಯ ಲಾಭದ ಉದ್ದೇಶದಿಂದ ತನ್ನ ಗಡಿಯೊಳಗೆ ನಡೆಯುವ ಭಯೋತ್ಪಾದನಾ ಕೃತ್ಯಗಳನ್ನು ಯಾವುದೇ ಸರ್ಕಾರವೂ ಕಡೆಗಣಿಸಬಾರದು ಎಂದು ಪ್ರತಿಪಾದಿಸಿದೆ. </p>.<p>‘ಕಾನಿಷ್ಕ’ ಬಾಂಬ್ ಸ್ಫೋಟ ಘಟನೆಯ 39ನೇ ವರ್ಷಾಚರಣೆ ಅಂಗವಾಗಿ ಕೆನಡಾದಲ್ಲಿರುವ ಭಾರತೀಯ ಹೈಕಮಿಷನರ್ ಕಚೇರಿ ಭಾನುವಾರ ಹೇಳಿಕೆ ಹೊರಡಿಸಿದ್ದು, ‘ಭಯೋತ್ಪಾದನೆಗೆ ಯಾವುದೇ ಗಡಿ, ರಾಷ್ಟ್ರೀಯತೆ ಮತ್ತು ಜನಾಂಗ ಎಂಬುದಿಲ್ಲ’ ಎಂದಿದೆ.</p>.<p>ಕೆನಡಾದ ಮಾಂಟ್ರಿಯಲ್ನಿಂದ ನವದೆಹಲಿಗೆ ಸಂಚರಿಸುತ್ತಿದ್ದ ಏರ್ ಇಂಡಿಯಾದ ‘ಕಾನಿಷ್ಕ’ ವಿಮಾನವನ್ನು ಸಿಖ್ ಉಗ್ರಗಾಮಿಗಳು 1985ರ ಜೂನ್ 23ರಂದು ಸ್ಫೋಟಿಸಿದ್ದರು. ವಿಮಾನದಲ್ಲಿದ್ದ 89 ಮಕ್ಕಳು ಸೇರಿ ಎಲ್ಲ 329 ಜನರು ಮೃತಪಟ್ಟಿದ್ದರು. </p>.<p>‘ಹೇಡಿತನದ ಕೃತ್ಯ ನಡೆದು 39 ವರ್ಷಗಳು ಕಳೆದಿವೆ. ದುರದೃಷ್ಟವಶಾತ್, ಭಯೋತ್ಪಾದನೆಯು ಇಂದು ಕೂಡಾ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆಯಾಗಿಯೇ ಉಳಿದುಕೊಂಡಿದೆ’ ಎಂದು ಪ್ರಕಟಣೆ ತಿಳಿಸಿದೆ.</p>.<p>‘1985ರ ಕಾನಿಷ್ಕ ಘಟನೆ ಸೇರಿದಂತೆ ಭಯೋತ್ಪಾದನೆಯನ್ನು ವೈಭವೀಕರಿಸುವ ಯಾವುದೇ ಕೃತ್ಯ ವಿಷಾದನೀಯ. ಶಾಂತಿಯನ್ನು ಬಯಸುವ ಎಲ್ಲ ದೇಶಗಳು ಮತ್ತು ಜನರು ಅದನ್ನು ಖಂಡಿಸಬೇಕು’ ಎಂದು ಹೇಳಿದೆ.</p>.<p>ಈ ದುರಂತ ಘಟನೆಯನ್ನು ಸ್ಮರಿಸಲು ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಭಾರತದ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ, ‘ಕ್ಷಣಿಕ ರಾಜಕೀಯ ಹಿತಾಸಕ್ತಿಗಿಂತ ಮಾನವ ಜೀವನವು ಹೆಚ್ಚು ಮುಖ್ಯವಾಗಿದೆ. ಭಯೋತ್ಪಾದಕ ಚಟುವಟಿಕೆಗಳು ಮಾನವೀಯತೆಗೆ ಹಾನಿಕರವಾಗುವ ಮುನ್ನವೇ ಅದನ್ನು ಹೊಸಕಿಹಾಕುವುದು ಅಗತ್ಯ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>