ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಆರ್‌ಸಿ ಆಂತರಿಕ ವಿಷಯ: ಶ್ರಿಂಗ್ಲಾ ಭರವಸೆ

Last Updated 2 ಮಾರ್ಚ್ 2020, 19:16 IST
ಅಕ್ಷರ ಗಾತ್ರ

ಢಾಕಾ: ಬಾಂಗ್ಲಾದೇಶದ ಪ್ರಜೆಗಳ ಮೇಲೆಎನ್‌ಆರ್‌ಸಿ ಪರಿಣಾಮ ಬೀರುವುದಿಲ್ಲ. ಎನ್‌ಆರ್‌ಸಿ ಪ್ರಕ್ರಿಯೆ ಸಂಪೂರ್ಣ ಆಂತರಿಕ ವಿಷಯ ಎಂದುಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್‌ ಶ್ರಿಂಗ್ಲಾ ಭರವಸೆ ನೀಡಿದ್ದಾರೆ.

ಸೋಮವಾರ ಢಾಕಾದಲ್ಲಿ ನಡೆದ ‘ಬಾಂಗ್ಲಾದೇಶ ಮತ್ತು ಭಾರತ’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಈವರೆಗೆ ಭಾರತ–ಬಾಂಗ್ಲಾದೇಶದ ಗಡಿ ವಿವಾದ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಪ್ರಬುದ್ಧತೆ, ಸೌಜನ್ಯತೆಯಿಂದ ಬಗೆಹರಿಸಿಕೊಳ್ಳಲಾಗುತ್ತಿದೆ ಎಂದರು.

ಎನ್‌ಆರ್‌ಸಿ ಆಂತರಿಕ ವಿಷಯ ಎಂದು ಬಾಂಗ್ಲಾದೇಶಕ್ಕೆ ಭಾರತ ಭರವಸೆ ನೀಡಿದ್ದರೂ, ಎನ್‌ಆರ್‌ಸಿ ಬಗ್ಗೆ ಬಾಂಗ್ಲಾದೇಶ ಅಸಮಾಧಾನ ವ್ಯಕ್ತಪಡಿಸಿತ್ತು. ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ ಅಬ್ದುಲ್‌ ಮೊಮೆನ್‌ ಹಾಗೂ ಗೃಹ ಸಚಿವ ಅಸಾದುಜ್ಜಾಮಾನ್‌ಖಾನ್‌ ಅವರು ಡಿಸೆಂಬರ್‌ನಲ್ಲಿ ಭಾರತದ ಭೇಟಿಯನ್ನು ರದ್ದುಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT