‘ಈ ರಸ್ತೆ ನಿರ್ಮಾಣ ಪ್ರಾಂತೀಯ ಸರ್ಕಾರಕ್ಕೆ ಸಂಬಂಧಿಸಿದ್ದು ಎಂದಾದರೆ, ಪಂಜಾಬ್ ಪ್ರಾಂತ್ಯದ ಮೂಲಕ ಹಾಯ್ದುಹೋಗುವ ಕರ್ತಾರ್ಪುರ ಕಾರಿಡಾರ್ ಅನ್ನು ನಿರ್ಮಿಸಿ, ನಿರ್ವಹಿಸುವ ಕಾರ್ಯವನ್ನು ಒಕ್ಕೂಟ ಸರ್ಕಾರ ಏಕೆ ಮಾಡುತ್ತಿದೆ. ಸರ್ಕಾರಗಳು ಕಾನೂನು ಪ್ರಕಾರ ಕಾರ್ಯ ನಿರ್ವಹಿಸುತ್ತವೆಯೋ ಅಥವಾ ತಮಗೆ ಇಷ್ಟ ಬಂದಂತೆ ಆಡಳಿತ ನಡೆಸುತ್ತಿವೆಯೋ’ ಎಂದು ನ್ಯಾಯಮೂರ್ತಿ ಖಾನ್ ಪ್ರಶ್ನಿಸಿದರು.