‘ಮಾದಕವಸ್ತುಗಳ ಬಳಕೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಜನರಲ್ಲಿರುವ ಅರಿವಿನ ಕೊರತೆಯೇ ಇಂದಿನ ಬೆಳವಣಿಗೆಗೆ ಕಾರಣ. ಈ ಹಿನ್ನೆಲೆಯಲ್ಲಿ ಮಾದಕವಸ್ತುಗಳ ಕುರಿತು ಜನರ ಮನೋಭಾವ ಮತ್ತು ಅದರಿಂದ ಉಂಟಾಗುವ ಅಪಾಯದ ನೈಜತೆಯನ ನಡುವಿರುವ ಕಂದಕವನ್ನು ತೆಗೆದು ಹಾಕಬೇಕು. ಅದಕ್ಕಾಗಿ ಈ ಮಾದಕವಸ್ತುಗಳ ಬಳಕೆಯ ಅಪಾಯ ಕುರಿತು ಯುವಕರಲ್ಲಿ ಅರಿವು ಮೂಡಿಸಬೇಕು, ಈ ಮೂಲಕ ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಬೇಕು‘ ಎಂದು ಯುಎನ್ಒಡಿಸಿ ಕಾರ್ಯನಿರ್ವಾಹಕ ನಿರ್ದೇಶಕ ಘಡಾ ವಾಲಿ ಹೇಳಿದ್ದಾರೆ.