ದೇವಾಲಯಕ್ಕೆ ಅರ್ಪಿಸುವ ಹೂವುಗಳು ಕೊಳೆತು ತ್ಯಾಜ್ಯಗಳಾಗಿ ನದಿ ಸೇರುತ್ತಿವೆ. ಕೊಳೆತ ಹೂವಿನಿಂದ ಬಿಡುಗಡೆಯಾಗುವ ಆರ್ಸೆನಿಕ್, ಸೀಸ ಮತ್ತು ಕ್ಯಾಡ್ಮಿಯಂನಂತಹ ಕೀಟನಾಶಕಗಳು, ವಿಷ ಪದಾರ್ಥ ನದಿಯ ನೀರನ್ನು ಮಾಲಿನ್ಯಗೊಳಿಸಿ, ಜಲಚರಗಳಿಗೂ ಕಂಟಕವಾಗುತ್ತಿದೆ. ಅಲ್ಲದೆ, ನೀರಿನ ಮೂಲಕ ಅಗಾಧ ಪ್ರಮಾಣದಲ್ಲಿ ರೋಗ ಹರಡಲು ಕಾರಣವಾಗುತ್ತಿದೆ.