ಹಲವು ವರ್ಷಗಳ ಕಾಲ ಈ ಪ್ರಾಂತ್ಯದ ಕಷ್ಗರ್ ನಗರದ ಪ್ರಮುಖ ಮಸೀದಿ ಹೊರಗೆ ಜನದಟ್ಟಣೆ ಇರುತ್ತಿತ್ತು. ರಮ್ಜಾನ್ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಲು ಇಲ್ಲಿ ಮುಸ್ಲಿಮರು ಸೇರುವುದು ಸಾಮಾನ್ಯವಾಗಿತ್ತು. ಆದರೆ, ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಇಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮಸೀದಿ ಒಳಗೆ ಪ್ರವೇಶಿಸುವ ಮುನ್ನ ಲೋಹ ಶೋಧಕದ ಮೂಲಕ ತಪಾಸಣೆಗೆ ಒಳಪಡಬೇಕು.