‘ಭಾರತದ ಸೌಮ್ಯ ಸ್ವಭಾವ ಇಡೀ ವಿಶ್ವಕ್ಕೆ ಚೆನ್ನಾಗಿ ಗೊತ್ತಿದೆ. ನೆರೆಯ ರಾಷ್ಟ್ರಗಳೊಂದಿಗೆ ವಿನಾಕಾರಣ ಕಾಲು ಕೆರೆದು ಜಗಳಕ್ಕಿಳಿಯುವ ಸ್ವಭಾವ ಭಾರತದ್ದಲ್ಲ.ಅನಗತ್ಯ ತಂಟೆ, ತಕರಾರು ಮಾಡುವ ತಂಟೆಕೋರ ರಾಷ್ಟ್ರವಲ್ಲ. ಯಾವುದೇ ದೇಶದ ಮೇಲೆ ದಂಡೆತ್ತಿ ಹೋದ ನಿದರ್ಶನಗಳಿಲ್ಲ. ಸಾಮ್ರಾಜ್ಯ ವಿಸ್ತರಣೆ, ಅತಿಕ್ರಮಣದ ಹಪಾಹಪಿಯೂ ಇಲ್ಲ’ ಎಂದರು.