<div> <strong>ವಾಷಿಂಗ್ಟನ್: </strong>ಇಸ್ಲಾಂಫೋಬಿಯಾ ಮತ್ತು ಪರಕೀಯತೆಯ ದ್ವೇಷಕ್ಕೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಗುರಿಯಾಗುತ್ತಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯ ಪ್ರವೇಶ ಮಾಡಿ ಇದನ್ನು ತಡೆಯಬೇಕು ಎಂದು ಅಮೆರಿಕದಲ್ಲಿರುವ ಭಾರತೀಯ ಸಮುದಾಯದವರು ಆಗ್ರಹಿಸಿದ್ದಾರೆ. <br /> <div> ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದವರು, ಅದರಲ್ಲೂ ಹಿಂದೂ ಮತ್ತು ಸಿಖ್ಖರು ಇಸ್ಲಾಂಫೋಬಿಯಾ ಮತ್ತು ದ್ವೇಷಕ್ಕೆ ಬಲಿಯಾಗುತ್ತಿರುವುದನ್ನು ಖಂಡಿಸಿ ಭಾರತೀಯ ಸಮುದಾಯದವರು ಶ್ವೇತ ಭವನದ ಎದುರು ಭಾನುವಾರ ರ್ಯಾಲಿ ನಡೆಸಿದರು. <br /> </div><div> ‘ಇಸ್ಲಾಂ ಫೋಬಿಯಾದಿಂದಾಗಿ ಹಿಂದೂಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಮುಂದೆ ಇಡೀ ಭಾರತೀಯ ಸಮುದಾಯವೇ ಇದಕ್ಕೆ ಬಲಿಪಶು ಆಗಬೇಕಾಗುತ್ತದೆ’ ಎಂದು ವರ್ಜಿನಿಯಾ ಮೂಲದ ವಕೀಲ ವಿಂಧ್ಯಾ ಅಡಪ ಹೇಳಿದ್ದಾರೆ.<br /> </div><div> ‘ದ್ವೇಷಾಪರಾಧದ ವಿರುದ್ಧ ಜಾಗೃತಿ ಮೂಡಿಸಲು ನಾವು ಇಲ್ಲಿ ಸೇರಿದ್ದೇವೆ. ಇದು ಟ್ರಂಪ್ ಆಡಳಿತದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಅಲ್ಲ. ದ್ವೇಷಾಪರಾಧದ ವಿರುದ್ಧ ಪಕ್ಷಾತೀತ ಬೆಂಬಲ ಪಡೆಯಲು ರ್ಯಾಲಿ ಹಮ್ಮಿಕೊಂಡಿದ್ದೇವೆ’ ಎಂದು ಅವರು ತಿಳಿಸಿದ್ದಾರೆ. <br /> </div><div> ‘ಅರಬ್ ಮತ್ತು ಮುಸ್ಲಿಂ ಎಂದು ತಪ್ಪಾಗಿ ಗ್ರಹಿಸಿ ಭಾರತ ಮೂಲದ ಟೆಕಿಯನ್ನು ಕನ್ಸಾಸ್ ನಗರದಲ್ಲಿ ಹತ್ಯೆ ಮಾಡಲಾಗಿತ್ತು. ಸದ್ಯದ ರಾಜಕೀಯ ವಾತಾವರಣ ನೋಡಿದರೆ ಅಮೆರಿಕದಲ್ಲಿರುವ ಭಾರತ ಮೂಲದ ಅಮೆರಿಕನ್ನರು ಸೇರಿದಂತೆ ಎಲ್ಲರ ಮೇಲೆ ಈ ರೀತಿಯ ದಾಳಿ ನಡೆಯಲಿದೆ<br /> ಎಂದೆನಿಸುತ್ತಿದೆ’ ಎಂದು ಭಾರತ ಮೂಲದ ವೈದ್ಯ ಎಸ್. ಶೇಷಾದ್ರಿ ಹೇಳಿದ್ದಾರೆ. </div><div> </div><div> ದ್ವೇಷ ಭಾವನೆಯನ್ನು ಕಿತ್ತು ಹಾಕಲು ಕ್ರಮ ಕೈಗೊಳ್ಳುವ ಮೂಲಕ ಭಾರತೀಯರ ಭಯ ಹೋಗಲಾಡಿಸಬೇಕು ಎಂದು ಪ್ರತಿ ಭಟನಾಕಾರರು ಮನವಿ ಮಾಡಿದ್ದಾರೆ.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<div> <strong>ವಾಷಿಂಗ್ಟನ್: </strong>ಇಸ್ಲಾಂಫೋಬಿಯಾ ಮತ್ತು ಪರಕೀಯತೆಯ ದ್ವೇಷಕ್ಕೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರು ಗುರಿಯಾಗುತ್ತಿದ್ದಾರೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯ ಪ್ರವೇಶ ಮಾಡಿ ಇದನ್ನು ತಡೆಯಬೇಕು ಎಂದು ಅಮೆರಿಕದಲ್ಲಿರುವ ಭಾರತೀಯ ಸಮುದಾಯದವರು ಆಗ್ರಹಿಸಿದ್ದಾರೆ. <br /> <div> ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದವರು, ಅದರಲ್ಲೂ ಹಿಂದೂ ಮತ್ತು ಸಿಖ್ಖರು ಇಸ್ಲಾಂಫೋಬಿಯಾ ಮತ್ತು ದ್ವೇಷಕ್ಕೆ ಬಲಿಯಾಗುತ್ತಿರುವುದನ್ನು ಖಂಡಿಸಿ ಭಾರತೀಯ ಸಮುದಾಯದವರು ಶ್ವೇತ ಭವನದ ಎದುರು ಭಾನುವಾರ ರ್ಯಾಲಿ ನಡೆಸಿದರು. <br /> </div><div> ‘ಇಸ್ಲಾಂ ಫೋಬಿಯಾದಿಂದಾಗಿ ಹಿಂದೂಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಮುಂದೆ ಇಡೀ ಭಾರತೀಯ ಸಮುದಾಯವೇ ಇದಕ್ಕೆ ಬಲಿಪಶು ಆಗಬೇಕಾಗುತ್ತದೆ’ ಎಂದು ವರ್ಜಿನಿಯಾ ಮೂಲದ ವಕೀಲ ವಿಂಧ್ಯಾ ಅಡಪ ಹೇಳಿದ್ದಾರೆ.<br /> </div><div> ‘ದ್ವೇಷಾಪರಾಧದ ವಿರುದ್ಧ ಜಾಗೃತಿ ಮೂಡಿಸಲು ನಾವು ಇಲ್ಲಿ ಸೇರಿದ್ದೇವೆ. ಇದು ಟ್ರಂಪ್ ಆಡಳಿತದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಅಲ್ಲ. ದ್ವೇಷಾಪರಾಧದ ವಿರುದ್ಧ ಪಕ್ಷಾತೀತ ಬೆಂಬಲ ಪಡೆಯಲು ರ್ಯಾಲಿ ಹಮ್ಮಿಕೊಂಡಿದ್ದೇವೆ’ ಎಂದು ಅವರು ತಿಳಿಸಿದ್ದಾರೆ. <br /> </div><div> ‘ಅರಬ್ ಮತ್ತು ಮುಸ್ಲಿಂ ಎಂದು ತಪ್ಪಾಗಿ ಗ್ರಹಿಸಿ ಭಾರತ ಮೂಲದ ಟೆಕಿಯನ್ನು ಕನ್ಸಾಸ್ ನಗರದಲ್ಲಿ ಹತ್ಯೆ ಮಾಡಲಾಗಿತ್ತು. ಸದ್ಯದ ರಾಜಕೀಯ ವಾತಾವರಣ ನೋಡಿದರೆ ಅಮೆರಿಕದಲ್ಲಿರುವ ಭಾರತ ಮೂಲದ ಅಮೆರಿಕನ್ನರು ಸೇರಿದಂತೆ ಎಲ್ಲರ ಮೇಲೆ ಈ ರೀತಿಯ ದಾಳಿ ನಡೆಯಲಿದೆ<br /> ಎಂದೆನಿಸುತ್ತಿದೆ’ ಎಂದು ಭಾರತ ಮೂಲದ ವೈದ್ಯ ಎಸ್. ಶೇಷಾದ್ರಿ ಹೇಳಿದ್ದಾರೆ. </div><div> </div><div> ದ್ವೇಷ ಭಾವನೆಯನ್ನು ಕಿತ್ತು ಹಾಕಲು ಕ್ರಮ ಕೈಗೊಳ್ಳುವ ಮೂಲಕ ಭಾರತೀಯರ ಭಯ ಹೋಗಲಾಡಿಸಬೇಕು ಎಂದು ಪ್ರತಿ ಭಟನಾಕಾರರು ಮನವಿ ಮಾಡಿದ್ದಾರೆ.</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>