ಪನಾಮಾ ಪೇಪರ್ಸ್ ಪ್ರಕರಣದಲ್ಲಿ ನವಾಜ್ ಷರೀಫ್ ದೋಷಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡುವ ಸಮಯದಲ್ಲಿ ನಿರ್ದೇಶಿಸಿದಂತೆ, ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಹೊಣೆಗಾರಿಕಾ ಸಂಸ್ಥೆಯ ಅಧ್ಯಕ್ಷ ಖಮರ್ ಜಮನ್ ಚೌಧರಿ ತಿಳಿಸಿದ್ದಾರೆ. ‘ಕೋರ್ಟ್ ನಮಗೆ ಆರು ವಾರಗಳ ಗಡುವು ನೀಡಿದೆ. ಅದು ಬರುವ ಸೆಪ್ಟೆಂಬರ್ 11ಕ್ಕೆ ಮುಕ್ತಾಯ ಆಗಲಿದೆ. ಆದ್ದರಿಂದ ಸೆಪ್ಟೆಂಬರ್ ಎರಡನೆಯ ವಾರದ ಒಳಗೇ ಷರೀಫ್, ಅವರ ಮಕ್ಕಳಾದ ಹುಸೇನ್, ಹಸನ್, ಮರಿಯಮ್ ಹಾಗೂ ಸಚಿವ ದರ್ ವಿರುದ್ಧ, ಮೊಕದ್ದಮೆ ದಾಖಲು ಮಾಡಲಾಗುತ್ತಿದೆ. ಇದರ ತನಿಖೆಯನ್ನು ಜಂಟಿ ತನಿಖಾ ದಳವು ನಡೆಸಲಿದೆ’ ಎಂದು ಅವರು ಹೇಳಿದ್ದಾರೆ.