ಶ್ರೀ ಗುರು ವಚನುಪದೇಶವನಾಲಿಸಿದಾಗಳಹುದು ನರರಿಗೆ ಮುಕುತಿ ಎನ್ನುವ ಅನುಭಾವಿ ನಿಜಗುಣರು ಗುರುವಿನ ಉಪದೇಶ ಮಾತ್ರದಿಂದಲೇ ಮನುಷ್ಯರು ಮುಕ್ತಿಗೆ ಅರ್ಹರಾಗುವರೆಂಬ ವಾಸ್ತವವನ್ನು ನಮ್ಮ ಮುಂದಿರಿಸಿದ್ದಾರೆ.
ನಿಜವನರಿದು ನಿಶ್ಚಿಂತನಾಗಿರುವ ಗುರು ಮಹಾಜ್ಞಾನಿ. ಅವನ ವಚನೋಪದೇಶದಲ್ಲಿ ಅದ್ಭುತವಾದ ಶಕ್ತಿಯಿದೆ. ನರಜನ್ಮವನ್ನು ಹರಜನ್ಮವಾಗಿಸುವ, ಭವಬಂಧನವನ್ನು ಬಿಡಿಸಿ ಪರಮಸುಖ ತೋರುವ, ಅಷ್ಟೇ ಏಕೆ, ಭಗವಂತನನ್ನೇ ಕರಗತ ಮಾಡಿಕೊಡುವ ಶಕ್ತಿ ಗುರುವಿಗಿದೆ ಎನ್ನುತ್ತಾಳೆ ಅಕ್ಕಮಹಾದೇವಿ.