ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ, 15–7–1994

Last Updated 14 ಜುಲೈ 2019, 17:41 IST
ಅಕ್ಷರ ಗಾತ್ರ

ರಾಮ ಮಂದಿರ ನಿರ್ಮಿಸಲು ವಿಎಚ್‌ಪಿಗೆ ಆಸ್ಪದ ಇಲ್ಲ: ಕಾಂಗೈ ರ್‍ಯಾಲಿಯಲ್ಲಿ ಪ್ರಧಾನಿ ಘೋಷಣೆ

ನವದೆಹಲಿ, ಜುಲೈ 14 (ಯುಎನ್‌ಐ)– ಅಯೋಧ್ಯೆಯಲ್ಲಿ ರಾಮ ದೇವಾಲಯವನ್ನು ಕಟ್ಟಲು ನಿಷೇಧಿತ ವಿಶ್ವ ಹಿಂದೂ ಪರಿಷತ್ತಿನ (ವಿಎಚ್‌ಪಿ) ನಿಯಂತ್ರಣದಲ್ಲಿರುವ ಟ್ರಸ್ಟ್‌ಗೆ ತಾವು ಎಂದೆಂದಿಗೂ ಅವಕಾಶ ನೀಡುವುದಿಲ್ಲವೆಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಇಂದು ಇಲ್ಲಿ ಸ್ಪಷ್ಟವಾಗಿ ತಿಳಿಸಿದರು. ಆದರೆ ಅಲ್ಲಿ ದೇವಾಲಯ ನಿರ್ಮಾಣ ಖಂಡಿತವಾಗಿ ಆಗಬೇಕು, ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಪರ್ಕವಿಲ್ಲದ ಧಾರ್ಮಿಕ ನಾಯಕರು ಇದನ್ನು ಮಾಡಬೇಕು ಎಂದು ಸೂಚಿಸಿದರು.

ಅಂತಿಮ ಘಟ್ಟಕ್ಕೆ ಬ್ರೆಜಿಲ್– ಇಟಲಿ

ಲಾಸ್‌ ಏಂಜಲೀಸ್, ಜುಲೈ 14– ಬ್ರೆಜಿಲ್ ಹಾಗೂ ಇಟಲಿ ತಂಡದವರು ವಿಶ್ವ ಕಪ್ ಫುಟ್ಬಾಲ್ ಚಾಂಪಿಯನ್‌ಷಿಪ್ ಫೈನಲ್ ತಲುಪಿದ್ದಾರೆ. 1970ರ ಫೈನಲ್‌ನ ಪುನಾರಾವರ್ತನೆಯಾಗಲಿರುವ ಭಾನುವಾರದ ಫೈನಲ್‌ನಲ್ಲಿ ಯಾರು ಗೆದ್ದರೂ ವಿಶ್ವ ಕಪ್ ಇತಿಹಾಸದಲ್ಲಿ ದಾಖಲೆಯ ನಾಲ್ಕನೆ ಬಾರಿಗೆ ಪ್ರಶಸ್ತಿ ಪಡೆದಂತಾಗುವುದು.

ಮಳೆಗೆ 32 ಜನ ಬಲಿ

ಬೆಂಗಳೂರು, ಜುಲೈ 14– ರಾಜ್ಯದಲ್ಲಿ ಬೀಳುತ್ತಿರುವ ಭಾರೀ ಮಳೆಗೆ 32 ಜನರು ಬಲಿಯಾಗಿದ್ದು, ಸುಮಾರು 26 ಕೋಟಿ ರೂಪಾಯಿ ಬೆಲೆಯ ಆಸ್ತಿಪಾಸ್ತಿ ನಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT