ನವದೆಹಲಿ, ಜುಲೈ 15 (ಪಿಟಿಐ, ಯುಎನ್ಐ)– ‘ಅಸಾಧ್ಯ ಪೂರ್ವಷರತ್ತು’ ಗಳನ್ನು ವಿಧಿಸುವ ಮೂಲಕ ದ್ವಿಪಕ್ಷೀಯ ಮಾತುಕತೆಗಳಿಗೆ ಪಾಕಿಸ್ತಾನ ಅಡ್ಡಿಯುಂಟು ಮಾಡುತ್ತಿದೆ ಎಂದು ಭಾರತ ಇಂದು ಆರೋಪಿಸಿತು. ಮಾತುಕತೆಗಳ ಸಂಬಂಧ ಇಸ್ಲಾಮಾಬಾದ್ನ ನಡವಳಿಕೆಯನ್ನು ಗಮನಿಸಿದರೆ ಮಾತುಕತೆ ಶೀಘ್ರದಲ್ಲಿ ಪುನರಾರಂಭವಾಗುವ ಲಕ್ಷಣಗಳು ಕಂಡುಬರುತ್ತಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಶ್ರೀನಿವಾಸನ್ ಸುದ್ದಿಗಾರರಿಗೆ ತಿಳಿಸಿದರು.