ಐದು ದಿನಗಳ ಹಿಂದೆ, ಆಸ್ಪತ್ರೆಯಲ್ಲಿದ್ದ ಎಚ್.ಎಸ್.ದೊರೆಸ್ವಾಮಿ ಅವರನ್ನು ಭೇಟಿಯಾಗಲು ಹೋಗಿದ್ದರವಿಕೃಷ್ಣಾ ರೆಡ್ಡಿ ಅವರ ಮೊಬೈಲ್ನಿಂದ ಕರೆ ಮಾಡಿ ನನ್ನ ಜತೆ ಮಾತನಾಡಿದ್ದರು. ‘ಆನಂದದಿಂದ ಹೋಗುತ್ತಿದ್ದೇನೆ ರಾಮಸ್ವಾಮಿಯವರೇ. ಅಲ್ಲೂ ನಿಮ್ಮ ಸ್ಮರಣೆ ಮಾಡುತ್ತೇನೆ’ ಅಂದ್ರು. ಆ ಮಾತು ಮನಸ್ಸಿಗೆ ತುಂಬಾ ನೋವು ಉಂಟು ಮಾಡಿತು. ಪುರಭವನದ ಮುಂದೆ ಭೂ ಕಬಳಿಕೆ ವಿರುದ್ಧ ನಡೆದ ಹೋರಾಟದಲ್ಲಿ 39 ದಿನವೂ ಪಾಲ್ಗೊಂಡಿದ್ದರು. ‘ಇಳಿ ವಯಸ್ಸಿನಲ್ಲೂ ಆರೋಗ್ಯದಿಂದ ಇರುವುದರ ಗುಟ್ಟೇನು?’ ಅಂತ ಕೇಳಿದಾಗ, ನಕ್ಕು ಸುಮ್ಮನಾಗಿದ್ದರು. ಮತ್ತೆಕೇಳಿದಾಗ, ‘ಬಡತನ’ ಎಂದಿದ್ದರು.