ಕೆಲವು ವರ್ಷಗಳ ಹಿಂದೆ ಹೋರಾಟಗಾರರೊಬ್ಬರು ಗ್ರಾನೈಟ್ ದಂಧೆಯ ವಿರುದ್ಧ ಹೋರಾಟಕ್ಕಿಳಿದಿದ್ದರು. ಪರಿಹಾರ ಸಿಗದಿದ್ದಾಗ ಎತ್ತರದ ಮರ ಏರಿ ಕುಳಿತುಬಿಟ್ಟಿದ್ದರು. ನಾನು ಸೇರಿದಂತೆ ಉಳಿದವರು, ಅಧಿಕಾರಿಗಳು, ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಆತ ಕೆಳಗೆ ಇಳಿಯಲು ಒಪ್ಪಿರಲಿಲ್ಲ. ಕೊನೆಗೆ ನನಗೆ ಹೊಳೆದದ್ದು ದೊರೆಸ್ವಾಮಿ. ಬಹುಶಃ ಅವರ ಮಾತಿಗೆ ಮನ್ನಣೆ ನೀಡಬಹುದು ಎಂದು ತಕ್ಷಣ ಅವರ ಮನೆಗೆ ಧಾವಿಸಿದೆ.