‘ಮರ್ಯಾದಾ ಪುರುಷೋತ್ತಮನೆ, ಫೋನಿ ಚಂಡಮಾರುತದಂತೆ ಏನಿದು ನಿನ್ನ ಮುಖದಲ್ಲಿಯೂ ಚಿಂತೆಯ ಕಾರ್ಮೋಡಗಳು ಕವಿದಿವೆಯಲ್ಲ?’ ‘ಪ್ರಾಣಕಾಂತೆ ನೋಡಲ್ಲಿ, ಚೌಕೀದಾರನು ಗಂಗೆಗೆ ಮಹಾ ಆರತಿ ಬೆಳಗುತ್ತಿದ್ದಾನೆ. ನನ್ನ ಮಂಗಳಾರತಿ ಮರೆತೇ ಬಿಟ್ಟಿದ್ದಾರೆ. ಮಹಾ(ನ್) ಭಾರತದಲ್ಲಿ ನಡೆಯುತ್ತಿರುವ ಚುನಾವಣಾ ರಾಮಾಯಣದಲ್ಲಿ ನನ್ನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ನೋಡಿ ಚಿಂತಾಕ್ರಾಂತನಾಗಿರುವೆ’.