<p>‘ಏನಿಲ್ಲ, ಏನಿಲ್ಲ... ಏನೇನಿಲ್ಲ’ ಎಂದು ಹಾಡುತ್ತ ಬಂದ ಮುದ್ದಣ್ಣ. ‘ಕವಿಯಾದವನು, ಗಾಯಕನೂ ಆಗೋಕೆ ಹೊರಟಂಗಿದೆ’ ಕಿಚಾಯಿಸಿದ ವಿಜಿ.</p>.<p>‘ಕಲಬುರ್ಗಿ ಸಾಹಿತ್ಯ ಸಮ್ಮೇಳನಕ್ಕೆ ಹೋಗ್ತಿದೀನಿ ಸರ್... ಅಲ್ಲಿ ನಾನೂ ಕವನ ವಾಚನ ಮಾಡ್ಬೇಕು. ಅದನ್ನ ರಾಗವಾಗಿ ಹೇಳೋದನ್ನ ಅಭ್ಯಾಸ ಮಾಡ್ತಿದ್ದೆ’.</p>.<p>‘ಯಾವ ಕವನ ಬರೆದಿದ್ದೀಯಾ?’</p>.<p>‘ನಮ್ಮ ಭಾಗವತರು, ಸರ್ಕಾರಕ್ಕೂ ತಮ್ಮ ಸಂಘಟನೆಗೂ ಸಂಬಂಧ ಇಲ್ಲ ಅಂತ ಹೇಳಿದಾರಲಾ ಸರ್. ಆ ಮಾತನ್ನೇ ಸ್ಫೂರ್ತಿ<br />ಯಾಗಿಟ್ಟುಕೊಂಡು ಬರೆದಿದ್ದೀನಿ’.</p>.<p>‘ರಾಗವಾಗಿ ಹೇಳು ಕೇಳೋಣ’</p>.<p>‘ಉಪೇಂದ್ರ ಫಿಲ್ಮ್ ಟ್ಯೂನ್ನ ತಲೆಯಲ್ಲಿ<br />ಇಟ್ಕೊಂಡು ಈ ಕವನ ಕೇಳಿ ಸರ್... ಏನಿಲ್ಲ, ಏನಿಲ್ಲ, ಸಂಘ–ಸರ್ಕಾರ ನಡುವೆ ಏನಿಲ್ಲ, ಏನೇನಿಲ್ಲ...’</p>.<p>‘ಅಲ್ವೊ, ಏನೇನಿಲ್ಲ ಅಂದರೆ ಎಲ್ಲವೂ ಇದೆ ಅಂತಾನೇ ಅರ್ಥ ಬರಲ್ವಾ’ ಕೇಳಿದ ವಿಜಿ.</p>.<p>‘ಅದೇ ಪದ್ಯದ ಟೆಕ್ನಿಕ್ಕು ಸರ್... ಒಂದೇ ಪದದಲ್ಲಿ ಎರಡೆರಡು ಅರ್ಥ ಬರು<br />ವಂತಿರಬೇಕು’ ಕಾಲರ್ ಏರಿಸಿಕೊಂಡ ಮುದ್ದಣ್ಣ.</p>.<p>‘ನಿಜದಂತಿರುವುದು ಸುಳ್ಳಲ್ಲ, ಸುಳ್ಳುಗಳೆಲ್ಲ ನಿಜವಲ್ಲ...’‘ನಿಲ್ಸು, ನಿಲ್ಸು... ಆ ಹಾಡಿನ ಸಾಹಿತ್ಯವನ್ನೇ ಕದೀತಿದಿಯಲ್ಲ... ನಾಚಿಕೆಯಾಗಲ್ವ ನಿನಗೆ’ ಸಿಟ್ಟಿನಿಂದ ಹೇಳ್ದ ವಿಜಿ.</p>.<p>‘ಏಯ್, ಪೂರ್ತಿ ಕೇಳಿಸಿಕೊಳ್ಳಿ ಸರ್. ಸಮ್ಮೇಳನವದು ಸಾಹಿತ್ಯವಲ್ಲ, ಸಾಹಿತ್ಯವೇ ಸಮ್ಮೇಳನವಲ್ಲ ಅಂತ ಬದಲಾಯಿಸಿದೀನಿ... ಕಂಟಿನ್ಯೂ ಮಾಡಲಾ?’</p>.<p>‘ಮುಂದೆ ನಾನೇ ಹೇಳ್ತೀನಿ ಕೇಳು... ಕಲ್ಯಾಣವದು ಕರ್ನಾಟಕವಲ್ಲ, ಕರ್ನಾಟಕದಲ್ಲಿ ಕಲ್ಯಾಣ ಇಲ್ಲ...ಏನಿಲ್ಲ... ಏನೇನಿಲ್ಲ...’ ವಿಜಿ ಹಾಡತೊಡಗಿದ.</p>.<p>‘ಇದೊಂಥರಾ ಪೌರತ್ವ ತಿದ್ದುಪಡಿ ಕಾಯ್ದೆಗೂ, ಭಾರತೀಯ ಮುಸ್ಲಿಮರಿಗೂ ಸಂಬಂಧ ಇಲ್ಲ ಅಂತ ಹೇಳ್ದಂಗಾಯ್ತು’ ಕಣ್ಣು ಮಿಟುಕಿಸಿದ ಮುದ್ದಣ್ಣ.</p>.<p>‘ಇನ್ನೊಂದು ಸಾಲು ಹೊಳೆದಿದೆ. ಕೇಳು... ಏನಿಲ್ಲ, ಏನಿಲ್ಲ... ಸರ್ಕಾರ– ಅಭಿವೃದ್ಧಿ ನಡುವೆ ಏನಿಲ್ಲ... ಏನೇನೂ ಇಲ್ಲ!’</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>‘ಏನಿಲ್ಲ, ಏನಿಲ್ಲ... ಏನೇನಿಲ್ಲ’ ಎಂದು ಹಾಡುತ್ತ ಬಂದ ಮುದ್ದಣ್ಣ. ‘ಕವಿಯಾದವನು, ಗಾಯಕನೂ ಆಗೋಕೆ ಹೊರಟಂಗಿದೆ’ ಕಿಚಾಯಿಸಿದ ವಿಜಿ.</p>.<p>‘ಕಲಬುರ್ಗಿ ಸಾಹಿತ್ಯ ಸಮ್ಮೇಳನಕ್ಕೆ ಹೋಗ್ತಿದೀನಿ ಸರ್... ಅಲ್ಲಿ ನಾನೂ ಕವನ ವಾಚನ ಮಾಡ್ಬೇಕು. ಅದನ್ನ ರಾಗವಾಗಿ ಹೇಳೋದನ್ನ ಅಭ್ಯಾಸ ಮಾಡ್ತಿದ್ದೆ’.</p>.<p>‘ಯಾವ ಕವನ ಬರೆದಿದ್ದೀಯಾ?’</p>.<p>‘ನಮ್ಮ ಭಾಗವತರು, ಸರ್ಕಾರಕ್ಕೂ ತಮ್ಮ ಸಂಘಟನೆಗೂ ಸಂಬಂಧ ಇಲ್ಲ ಅಂತ ಹೇಳಿದಾರಲಾ ಸರ್. ಆ ಮಾತನ್ನೇ ಸ್ಫೂರ್ತಿ<br />ಯಾಗಿಟ್ಟುಕೊಂಡು ಬರೆದಿದ್ದೀನಿ’.</p>.<p>‘ರಾಗವಾಗಿ ಹೇಳು ಕೇಳೋಣ’</p>.<p>‘ಉಪೇಂದ್ರ ಫಿಲ್ಮ್ ಟ್ಯೂನ್ನ ತಲೆಯಲ್ಲಿ<br />ಇಟ್ಕೊಂಡು ಈ ಕವನ ಕೇಳಿ ಸರ್... ಏನಿಲ್ಲ, ಏನಿಲ್ಲ, ಸಂಘ–ಸರ್ಕಾರ ನಡುವೆ ಏನಿಲ್ಲ, ಏನೇನಿಲ್ಲ...’</p>.<p>‘ಅಲ್ವೊ, ಏನೇನಿಲ್ಲ ಅಂದರೆ ಎಲ್ಲವೂ ಇದೆ ಅಂತಾನೇ ಅರ್ಥ ಬರಲ್ವಾ’ ಕೇಳಿದ ವಿಜಿ.</p>.<p>‘ಅದೇ ಪದ್ಯದ ಟೆಕ್ನಿಕ್ಕು ಸರ್... ಒಂದೇ ಪದದಲ್ಲಿ ಎರಡೆರಡು ಅರ್ಥ ಬರು<br />ವಂತಿರಬೇಕು’ ಕಾಲರ್ ಏರಿಸಿಕೊಂಡ ಮುದ್ದಣ್ಣ.</p>.<p>‘ನಿಜದಂತಿರುವುದು ಸುಳ್ಳಲ್ಲ, ಸುಳ್ಳುಗಳೆಲ್ಲ ನಿಜವಲ್ಲ...’‘ನಿಲ್ಸು, ನಿಲ್ಸು... ಆ ಹಾಡಿನ ಸಾಹಿತ್ಯವನ್ನೇ ಕದೀತಿದಿಯಲ್ಲ... ನಾಚಿಕೆಯಾಗಲ್ವ ನಿನಗೆ’ ಸಿಟ್ಟಿನಿಂದ ಹೇಳ್ದ ವಿಜಿ.</p>.<p>‘ಏಯ್, ಪೂರ್ತಿ ಕೇಳಿಸಿಕೊಳ್ಳಿ ಸರ್. ಸಮ್ಮೇಳನವದು ಸಾಹಿತ್ಯವಲ್ಲ, ಸಾಹಿತ್ಯವೇ ಸಮ್ಮೇಳನವಲ್ಲ ಅಂತ ಬದಲಾಯಿಸಿದೀನಿ... ಕಂಟಿನ್ಯೂ ಮಾಡಲಾ?’</p>.<p>‘ಮುಂದೆ ನಾನೇ ಹೇಳ್ತೀನಿ ಕೇಳು... ಕಲ್ಯಾಣವದು ಕರ್ನಾಟಕವಲ್ಲ, ಕರ್ನಾಟಕದಲ್ಲಿ ಕಲ್ಯಾಣ ಇಲ್ಲ...ಏನಿಲ್ಲ... ಏನೇನಿಲ್ಲ...’ ವಿಜಿ ಹಾಡತೊಡಗಿದ.</p>.<p>‘ಇದೊಂಥರಾ ಪೌರತ್ವ ತಿದ್ದುಪಡಿ ಕಾಯ್ದೆಗೂ, ಭಾರತೀಯ ಮುಸ್ಲಿಮರಿಗೂ ಸಂಬಂಧ ಇಲ್ಲ ಅಂತ ಹೇಳ್ದಂಗಾಯ್ತು’ ಕಣ್ಣು ಮಿಟುಕಿಸಿದ ಮುದ್ದಣ್ಣ.</p>.<p>‘ಇನ್ನೊಂದು ಸಾಲು ಹೊಳೆದಿದೆ. ಕೇಳು... ಏನಿಲ್ಲ, ಏನಿಲ್ಲ... ಸರ್ಕಾರ– ಅಭಿವೃದ್ಧಿ ನಡುವೆ ಏನಿಲ್ಲ... ಏನೇನೂ ಇಲ್ಲ!’</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>