ಆದರೆ, ಯಾವಾಗಲೂ ನಸುನಗುತ್ತಲೇ ಇರುತ್ತಿದ್ದ ಅಬ್ದುಲ್ ಕಲಾಂ ಅವರ ಮೊಗವೂ ಕಳಾಹೀನವಾಗಿತ್ತು. ‘ಶ್ರೀರಾಮನ ಅಸ್ತ್ರ- ಶಸ್ತ್ರ
ಗಳು, ವಿಷ್ಣುವಿನ ಚಕ್ರವೇ ಕ್ಷಿಪಣಿಗಳು’ ಎಂಬ ಕುಲಪತಿಯ ಹೇಳಿಕೆ ಅವರನ್ನೂ ಬೇಸರಕ್ಕೆ ನೂಕಿತ್ತು. ತಮ್ಮ ‘ಭಾರತದ ಕ್ಷಿಪಣಿ ಪಿತಾಮಹ’ ಬಿರುದನ್ನು ಶ್ರೀರಾಮನಿಗೇ ಹಿಂದಿರುಗಿಸಲು ನಿರ್ಧರಿಸಿದವರೇ, ಭಗವಂತನನ್ನು ಹುಡುಕತೊಡಗಿದರು.