‘ಹಾಕ್ತೀನ್ರೀ, ಈ ಹಬ್ಬಕ್ಕೆ ಬಂಗಾರದ ಸರ ಮಾಡಿಸಿಕೊಡ್ತೀನಿ ಅಂತ ಲಕ್ಷ್ಮಿಗೆ ಹರಕೆ ಹೊತ್ತಿದ್ದೆ, ಸೀರೆ ಜೊತೆಗೆ ಸರವನ್ನೂ ಖರೀದಿಸಬೇಕು’.
‘ಸರಿ. ಆಗಬಹುದು’.
‘ಕುಂಕುಮಕ್ಕೆಂದು ಮನೆಗೆ ಬರುವ ನೆರೆಹೊರೆಯ ಹೆಂಗಸರು ಲಕ್ಷ್ಮಿ ಅಲಂಕಾರ ನೋಡುವಾಗ ಎದ್ದುಕಾಣುವಂತೆ ಕನಕಾಂಬರ ಕಲರ್ ನೋಟಿನ ಕಂತೆಗಳನ್ನು ಜೋಡಿಸಬೇಕು’.
‘ಯಾರನ್ನು ಬೇಕಾದ್ರೂ ಕರಿ, ಆದರೆ, ಪಕ್ಕದ ಬೀದಿಯಲ್ಲಿರುವ ಆದಾಯ ತೆರಿಗೆ ಅಧಿಕಾರಿಯ ಹೆಂಡ್ತಿಯನ್ನು ಮಾತ್ರ ಕುಂಕುಮಕ್ಕೆ ಕರೆಯಬೇಡ’.
‘ಯಾಕ್ರೀ? ಅವರು ತುಂಬಾ ಒಳ್ಳೆಯವರು, ನಮ್ಮ ಮಹಿಳಾ ಸಮಾಜಕ್ಕೆ ಬಹಳಷ್ಟು ಸಹಾಯ ಮಾಡಿದ್ದಾರೆ’.
‘ಹಾಗಲ್ಲಾ, ನಮ್ಮ ಮನೆ ದೇವರ ಅಲಂಕಾರಕ್ಕೆ ಇಟ್ಟ ಹಣ, ಒಡವೆ ಬಗ್ಗೆ ಅವರು ತಮ್ಮ ಗಂಡನಿಗೆ ವರದಿ ಮಾಡ್ತಾರೆ, ಗಂಡನ ಮೂಲಕ ಆಫೀಸ್ಗೆ ಸುದ್ದಿ ತಲುಪಿ ಅವರು ನಮ್ಮ ಮನೆ ಮೇಲೆ ತೆರಿಗೆ ದಾಳಿ ಮಾಡಿಬಿಟ್ಟರೆ?!...’ ವಿಶ್ವನಿಗೆ ಭಯ.
‘ಮಾಡಲಿಬಿಡ್ರೀ, ನಮ್ಮ ಹೆಸರೂ ಪೇಪರ್ನಲ್ಲಿ ಬರ್ತದೆ...’ ಎನ್ನುತ್ತಾ ಕಾಫಿ ಗ್ಲಾಸ್ ಎತ್ತಿಕೊಂಡು ಹೊರಟಳು.